ಕುಷ್ಟಗಿ: ಬಳ್ಳಾರಿಯಿಂದ ತಾಲೂಕಿನ ಹನುಮಸಾಗರಕ್ಕೆ ಸಿಮೆಂಟ್ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಶನಿವಾರ ಪಟ್ಟಣದ ಹನುಮಸಾಗರ ರಸ್ತೆಯ ತಹಸಿಲ್ ಕಚೇರಿ ಬಳಿ ರಸ್ತೆ ಪಕ್ಕ ತಗ್ಗಿನಲ್ಲಿ ಉರುಳಿದೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲಾರಿ ಪಲ್ಟಿ ಹೊಡೆದು ಚಕ್ರಗಳು ಮೇಲ್ಮುಖವಾದ್ದರಿಂದ ಗಾಜುಗಳು ಪುಡಿ ಪುಡಿಯಾಗಿವೆ.