More

    ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ

    ಕುರುಗೋಡು: ಮಣ್ಣೂರಿನಲ್ಲಿ ಗಂಗಾಮತ ಸಮುದಾಯದವರು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಭಾನುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ಗಂಗಾಮತ ಸಮುದಾಯದ ಮಹಿಳೆಯರು ಮನೆಯಿಂದ ಸಿಹಿ ದಿನಿಸಿಗಳನ್ನು ತಯಾರಿಸಿ ಚೌಡಯ್ಯ ಭಾವಚಿತ್ರಕ್ಕೆ ನೈವೇದ್ಯ ಅರ್ಪಿಸಿದರು.

    ಇದನ್ನೂ ಓದಿ: ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾ ಮಿರ್ಜಾ ವರಿಸಲು ಮುಂದಾಗಿದ್ದ ಪಾಕ್​ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​

    ಕುಂಭ ಕಳಸದೊಂದಿಗೆ ಟ್ರ್ಯಾಕ್ಟರ್ ವಾಹನದಲ್ಲಿ ಚೌಡಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು. ಮಕ್ಕಳು ಅಂಬಿಗರ ಚೌಡಯ್ಯ ವೇಷ ಧರಿಸಿ ಗಮನ ಸಳೆದರು. ತಾಷಾರಾಂಡೋಲ್, ಮಂಗಳವಾದ್ಯಗಳೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಬೈರಿ ಗಂಗಾಧರ್, ಅಡಿವಿ ಪಕ್ಕೀರಪ್ಪ, ಆಟೋ ದೊಡ್ಡಬಸಪ್ಪ, ರಮೇಶ್, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts