More

    ಕುಂದೂರು ಡೇರಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

    ಕಿಕ್ಕೇರಿ: ಸಮೀಪದ ಕುಂದೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ದೇವರಾಜು ಹಾಗೂ ಉಪಾಧ್ಯಕ್ಷರಾಗಿ ಮಂಜಮ್ಮ ಆಯ್ಕೆಯಾದರು. ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದೇವರಾಜು ಹಾಗೂ ಕೆ.ಎಸ್.ರಾಮೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜಮ್ಮ ಹಾಗೂ ಚಂದ್ರ ನಾಮಪತ್ರ ಸಲ್ಲಿಸಿದ್ದರು. 7 ಮತ ಪಡೆದು ದೇವರಾಜು ಅಧ್ಯಕ್ಷರಾಗಿ ವಿಜೇತರಾದರೆ, 5 ಮತ ಪಡೆದ ಕೆ.ಎಸ್.ರಾಮೇಗೌಡ ಪರಾಜಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜಮ್ಮ 7 ಮತ ಪಡೆದು ಚುನಾಯಿತರಾದರೆ, ಚಂದ್ರ 5 ಮತ ಗಳಿಸಿ ಸೋಲುಂಡರು.ಚುನಾವಣಾಧಿಕಾರಿಯಾಗಿ ಭರತ್‌ಕುಮಾರ್ ಕಾರ್ಯನಿರ್ವಹಿಸಿದರು. ಕೆ.ಸಿ. ಆನಂದ, ಕೆ.ಆರ್.ಕುಮಾರ್, ಕೆ.ಚಂದ್ರಶೇಖರ್, ಕೆ.ಬಿ. ಶಿವಕುಮಾರ್, ಜಗದೀಶ್, ಮಂಜುಳಾ, ದೇವರಾಜಯ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts