More

    ತಂದೆಯನ್ನೇ ಕೊಂದ ಮಗ

    ಕೂಡಲಸಂಗಮ: ಸಮೀಪದ ಚೌಡಕಮಲದಿನ್ನಿ ಗ್ರಾಮದಲ್ಲಿ ಸೋಮವಾರ ರಾತ್ರಿ ಹೆತ್ತ ತಂದೆಯನ್ನೇ ಮಗ ಕಬ್ಬಿನ ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಚೌಡಕಮಲದಿನ್ನಿ ಗ್ರಾಮದ ಶಿವಾನಂದ ಸಂಗಪ್ಪ ಗೌಡರ (72) ಮಗನಿಂದ ಕೊಲೆಯಾದ ದುರ್ದೈವಿ. ರಾಜೇಂದ್ರ ಶಿವಾನಂದ ಗೌಡರ (35) ಕೊಲೆ ಮಾಡಿದ ದುರುಳು. ಸೋಮವಾರ ರಾತ್ರಿ ಮನೆಗೆ ಬಂದ ರಾಜೇಂದ್ರ, ತಂದೆ ಶಿವಾನಂದ ಹಾಗೂ ತನ್ನ ಪತ್ನಿ ಲಕ್ಷ್ಮೀಬಾಯಿ (ರೇಣುಕಾ) ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಶಿವಾನಂದ ಅವರನ್ನು ಹುನಗುಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಲಕ್ಷ್ಮೀಬಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸದ್ಯ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ನನ್ನ ಹೆಂಡತಿ ಲಕ್ಷ್ಮೀಬಾಯಿ ಶೀಲದ ಬಗ್ಗೆ ನನಗೆ ಸಂಶವಿತ್ತು ಹಾಗೂ ನನ್ನ ತಂದೆಯೊಂದಿಗೆ ಆಕೆಯ ಅನೈತಿಕ ಸಂಬಂಧವಿತ್ತು ಎಂದು ಆರೋಪಿ ರಾಜೇಂದ್ರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅಯ್ಯನಗೌಡ ಪಾಟೀಲ ತನಿಖೆ ಕೈಗೊಂಡಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts