ವಿಜಯನಗರ: ಕೆಎಸ್ಆರ್ಟಿಸಿ ಬಸ್ಸನ್ನು ನೋಡಿ ವಾಹನ ಸವಾರರು ಭಯಪಟ್ಟರೂ ಅಚ್ಚರಿ ಇಲ್ಲ. ಏಕೆಂದರೆ ಕೆಎಸ್ಆರ್ಟಿಸಿ ಬಸ್ ಮೇಲಿಂದ ಮೇಲೆ ಅಪಘಾತಕ್ಕೆ ಒಳಗಾಗುತ್ತಿದ್ದು, ಸಾವು-ನೋವು ಸಂಭವಿಸುತ್ತಲೇ ಇದೆ.
ಇದನ್ನೂ ಓದಿ: ಬಸ್ ಚಾಲಕನ ರಕ್ತದೊತ್ತಡ ತಗ್ಗಿ ಅಪಘಾತ; ಕ್ಯಾಂಟರ್ಗೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್
ಇತ್ತೀಚೆಗಷ್ಟೇ ಒಂದು ಅಪಘಾತದಲ್ಲಿ ಗಂಡ-ಹೆಂಡತಿ-ಮಗ ಮತ್ತು ಇನ್ನೆರಡು ಪ್ರತ್ಯೇಕ ಅಪಘಾತಗಳಲ್ಲಿ ಅಪ್ಪ-ಮಗ ಹಾಗೂ ಅಂಗವಿಕಲೆಯೊಬ್ಬಳನ್ನು ಬಲಿ ತೆಗೆದುಕೊಂಡಿದ್ದ ಕೆಎಸ್ಆರ್ಟಿಸಿ, ಇಂದು ಯುವಕನೊಬ್ಬನನ್ನು ಬಲಿ ಪಡೆದಿದೆ.
ಇದನ್ನೂ ಓದಿ: ಸಾಗರದಲ್ಲಿ ಬೆಳ್ಳಂಬೆಳಗ್ಗೆ ಕೆರೆಗೆ ಬಿದ್ದ ಕೆಎಸ್ಆರ್ಟಿಸಿ ಬಸ್
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಹೊಸ ಬಸ್ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಬಂಕ್ವೊಂದರ ಸಮೀಪ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಉಂಟಾಗಿದೆ. ಪರಿಣಾಮವಾಗಿ ಬೈಕ್ ಸವಾರ ಆಶಿಶ್ (19) ಮೃತಪಟ್ಟಿದ್ದಾನೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆ ಮಾರಣಾಂತಿಕವಾದ ಕೆಎಸ್ಆರ್ಟಿಸಿ: ಭೀಕರ ಅಪಘಾತ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು…