More

    KSRTC ಬಸ್​​ನಲ್ಲಿ ಕಳ್ಳಿಯರ ಕರಾಮತ್ತು: ಬಸ್​​ ಅಡ್ಡಗಟ್ಟಿ ಮೂವರನ್ನು ಸೆರೆ ಹಿಡಿದ ಪೊಲೀಸರು!

    ಮಂಡ್ಯ: KSRTC ಬಸ್​​ನಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯರನ್ನು ರಸ್ತೆಯಲ್ಲೇ ಬಸ್​​ ಅಡ್ಡಗಟ್ಟಿದ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.

    ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್​​ನಲ್ಲಿ ಮೂವರು ಮಹಿಳೆಯರು ಪ್ರಯಾಣಿಕರಂತೆ ಹತ್ತಿ ಕುಳಿತಿದ್ದರು, ನಿಲ್ದಾಣದಿಂದ ಬಸ್​ ಹೊರಟ ತಕ್ಷಣ ಪ್ರಯಾಣಿಕರ ಬ್ಯಾಗಿಗೆ ಕತ್ತರಿ ಹಾಕಲು ಯತ್ನಿಸಿದ್ದಾರೆ.

    ಬಸ್​​ನಲ್ಲಿದ್ದ ಬ್ಯಾಗ್​​ಗಳಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದುದು ಇತರೆ ಪ್ರಯಾಣಿಕರ ಕಣ್ಣಿಗೆ ಬಿದ್ದಿದೆ. ಈ ಮಹಿಳೆಯರ ವರ್ತನೆ ಅನುಮಾನಕ್ಕೆಡೆಮಾಡಿಕೊಟ್ಟಿದೆ. ಕೂಡಲೇ ಪ್ರಯಾಣಿಕನೊಬ್ಬ 112ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ರೀರಂಗಪಟ್ಟಣದಲ್ಲಿ ಈ ಬಸ್​ ಅಡ್ಡಗಟ್ಟಿದ್ದಾರೆ.

    ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಬಸ್ಸನ್ನು ನಿಲ್ಲಿಸಿದ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಅಂತೂ ಸಂಚರಿಸುವ ಬಸ್ಸಿನಲ್ಲೇ ಕಳ್ಳತನ ಮಾಡಲು ಯತ್ನಿಸಿದ ಮಹಿಳೆಯರನ್ನು ಪೊಲೀಸರು ಸೆರೆ ಹಿಡಿದಿದ್ದು, ಇತರೆ ಪ್ರಯಾಣಿಕರು ಸದ್ಯ ತಮ್ಮ ತಮ್ಮ ವಸ್ತುಗಳು ಕಳುವಾಗಿಲ್ಲ ಎಂದು ನಿರಾಳರಾದರು. (ದಿಗ್ವಿಜಯ ನ್ಯೂಸ್​)

    2039ರೊಳಗೆ ಬೆಂಗಳೂರಿಗರಿಗೆ ಕಾಡಬಹುದು ನೀರಿನ ಸಮಸ್ಯೆ? ಇಲ್ಲಿದೆ ಆಘಾತಕಾರಿ ವರದಿ

    ವೃದ್ಧ ದಂಪತಿಯನ್ನು ಮನೆಯಲ್ಲೇ ಕೂಡಿಹಾಕಿ ದರೋಡೆ! ಮೂವರು ಮುಸುಕುಧಾರಿಗಳಿಂದ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts