ಮಂಡ್ಯ: KSRTC ಬಸ್ನಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯರನ್ನು ರಸ್ತೆಯಲ್ಲೇ ಬಸ್ ಅಡ್ಡಗಟ್ಟಿದ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ನಲ್ಲಿ ಮೂವರು ಮಹಿಳೆಯರು ಪ್ರಯಾಣಿಕರಂತೆ ಹತ್ತಿ ಕುಳಿತಿದ್ದರು, ನಿಲ್ದಾಣದಿಂದ ಬಸ್ ಹೊರಟ ತಕ್ಷಣ ಪ್ರಯಾಣಿಕರ ಬ್ಯಾಗಿಗೆ ಕತ್ತರಿ ಹಾಕಲು ಯತ್ನಿಸಿದ್ದಾರೆ.
ಬಸ್ನಲ್ಲಿದ್ದ ಬ್ಯಾಗ್ಗಳಲ್ಲಿ ಕಳ್ಳತನ ಮಾಡಲು ಯತ್ನಿಸುತ್ತಿದ್ದುದು ಇತರೆ ಪ್ರಯಾಣಿಕರ ಕಣ್ಣಿಗೆ ಬಿದ್ದಿದೆ. ಈ ಮಹಿಳೆಯರ ವರ್ತನೆ ಅನುಮಾನಕ್ಕೆಡೆಮಾಡಿಕೊಟ್ಟಿದೆ. ಕೂಡಲೇ ಪ್ರಯಾಣಿಕನೊಬ್ಬ 112ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ರೀರಂಗಪಟ್ಟಣದಲ್ಲಿ ಈ ಬಸ್ ಅಡ್ಡಗಟ್ಟಿದ್ದಾರೆ.
ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಬಸ್ಸನ್ನು ನಿಲ್ಲಿಸಿದ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಅಂತೂ ಸಂಚರಿಸುವ ಬಸ್ಸಿನಲ್ಲೇ ಕಳ್ಳತನ ಮಾಡಲು ಯತ್ನಿಸಿದ ಮಹಿಳೆಯರನ್ನು ಪೊಲೀಸರು ಸೆರೆ ಹಿಡಿದಿದ್ದು, ಇತರೆ ಪ್ರಯಾಣಿಕರು ಸದ್ಯ ತಮ್ಮ ತಮ್ಮ ವಸ್ತುಗಳು ಕಳುವಾಗಿಲ್ಲ ಎಂದು ನಿರಾಳರಾದರು. (ದಿಗ್ವಿಜಯ ನ್ಯೂಸ್)
2039ರೊಳಗೆ ಬೆಂಗಳೂರಿಗರಿಗೆ ಕಾಡಬಹುದು ನೀರಿನ ಸಮಸ್ಯೆ? ಇಲ್ಲಿದೆ ಆಘಾತಕಾರಿ ವರದಿ
ವೃದ್ಧ ದಂಪತಿಯನ್ನು ಮನೆಯಲ್ಲೇ ಕೂಡಿಹಾಕಿ ದರೋಡೆ! ಮೂವರು ಮುಸುಕುಧಾರಿಗಳಿಂದ ಕೃತ್ಯ