More

    ಸಲ್ಮಾನ್​ ವೃತ್ತಿಜೀವನವನ್ನು ಸರ್ವನಾಶ ಮಾಡ್ತಾರಂತೆ ಕೆಆರ್​ಕೆ …

    ಮುಂಬೈ: ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್‌ಕೆ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ ವಿಷಯ ಗೊತ್ತೇ ಇದೆ. ಅದಕ್ಕೆ ಪ್ರತಿಯಾಗಿ ಸಲ್ಮಾನ್​ ಖಾನ್​ ಅವರ ವೃತ್ತಿಜೀವನವನ್ನೇ ನಾಶ ಮಾಡುವುದಾಗಿ ಕೆಆರ್​ಕೆ ಹೇಳಿದ್ದಾರೆ.

    ಇದನ್ನೂ ಓದಿ: ಜೂನ್ 18ಕ್ಕೆ ನೆಟ್​​ಫ್ಲಿಕ್ಸ್​ನಲ್ಲಿ ಧನುಷ್​ ನಟನೆಯ ‘ಜಗಮೇ ತಂಧಿರಮ್’ …

    ಕೆಲವು ದಿನಗಳ ಹಿಂದೆ ಸಲ್ಮಾನ್​ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್​ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದಲಿಗೆ, ಇನ್ನು ಮುಂದೆ ಸಲ್ಮಾನ್​ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಆ ನಂತರ ಉಲ್ಟಾ ಹೊಡೆದಿದ್ದರು. ಸಲ್ಮಾನ್​ ಖಾನ್​ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು.

    ಇನ್ನು, ಸಲ್ಮಾನ್​ ಖಾನ್​ ಅವರು ಮಾಡಿದ್ದೇ ಸರಿ ಎಂದು ಗಾಯಕ ಮಿಖಾ ಸಿಂಗ್​ ಸೇರಿದಂತೆ ಹಲವರು ಬೆಂಬೆಲಿಸಿದ್ದರು. ಕೆಆರ್​ಕೆ ಹಲವು ದಿನಗಳಿಂದ ಎಲ್ಲರ ಬಗ್ಗೆ ಕೆಟ್ಟ ವಿಮರ್ಶೆಗಳನ್ನು ಮಾಡುತ್ತಾ ಬಂದಿದ್ದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದು ಒಳ್ಳೆಯದೇ ಆಯಿತು ಎಂದು ಸಲ್ಮಾನ್​ ನಡೆಯನ್ನು ಬೆಂಬಲಿಸಿದ್ದರು. ಆ ನಂತರ ಕೆಆರ್​ಕೆ ಮತ್ತು ಮಿಖಾ ನಡುವೆ ಮಾತಿನ ಯುದ್ಧವೇ ನಡೆದಿತ್ತು. ಇದೀಗ ಕೆಆರ್​ಕೆ ಮತ್ತು ಸಲ್ಮಾನ್​ ವಿರುದ್ಧ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ: ಹಳೆಯ ಕಥೆಗೆ ಎಳ್ಳು-ನೀರು ಬಿಟ್ಟು ಹೊಸ ಚಿತ್ರದತ್ತ ರವಿ ಶ್ರೀವತ್ಸ …

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಬಾಲಿವುಡ್​ನ ಗೂಂಡಾ ಭಾಯ್​, ನಿನಗೆ ತಾಖತ್ತಿದ್ದರೆ ಎದುರಿಗೆ ಬಂದು ಯುದ್ಧ ಮಾಡು. ಅದು ಬಿಟ್ಟು ಯಾರ್ಯಾರದೋ ಹಿಂದೆ ಬಚ್ಚಿಟ್ಟುಕೊಂಡು ಯುದ್ಧ ಮಾಡಬೇಡ. ಇಷ್ಟೆಲ್ಲ ಆದ ಮೇಲೆ, ಒಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಇನ್ನು ನಿನ್ನ ವೃತ್ತಿಜೀವನ ಸರ್ವನಾಶ ಮಾಡುವುದೇ ಬಿಡುವುದಿಲ್ಲ. ನಿನ್ನ ಕೆರಿಯರ್​ ಹಾಳು ಮಾಡಿ, ಟಿವಿ ನಟನನ್ನಾಗಿ ಮಾಡುವುದು ಖಂಡಿತಾ’ ಎಂದು ಕೆಆರ್​ಕೆ ಹೇಳಿಕೊಂಡಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ 60 ಕೋಟಿಯ ಮನೆ ಖರೀದಿಸಿದ ಅಜಯ್ ದೇವಗನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts