ಮುಂಬೈ: ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ ವಿಷಯ ಗೊತ್ತೇ ಇದೆ. ಅದಕ್ಕೆ ಪ್ರತಿಯಾಗಿ ಸಲ್ಮಾನ್ ಖಾನ್ ಅವರ ವೃತ್ತಿಜೀವನವನ್ನೇ ನಾಶ ಮಾಡುವುದಾಗಿ ಕೆಆರ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಜೂನ್ 18ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಧನುಷ್ ನಟನೆಯ ‘ಜಗಮೇ ತಂಧಿರಮ್’ …
ಕೆಲವು ದಿನಗಳ ಹಿಂದೆ ಸಲ್ಮಾನ್ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಿದ ಕೆಆರ್ಕೆ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಅವರ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದಲಿಗೆ, ಇನ್ನು ಮುಂದೆ ಸಲ್ಮಾನ್ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ, ಆ ನಂತರ ಉಲ್ಟಾ ಹೊಡೆದಿದ್ದರು. ಸಲ್ಮಾನ್ ಖಾನ್ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು.
ಇನ್ನು, ಸಲ್ಮಾನ್ ಖಾನ್ ಅವರು ಮಾಡಿದ್ದೇ ಸರಿ ಎಂದು ಗಾಯಕ ಮಿಖಾ ಸಿಂಗ್ ಸೇರಿದಂತೆ ಹಲವರು ಬೆಂಬೆಲಿಸಿದ್ದರು. ಕೆಆರ್ಕೆ ಹಲವು ದಿನಗಳಿಂದ ಎಲ್ಲರ ಬಗ್ಗೆ ಕೆಟ್ಟ ವಿಮರ್ಶೆಗಳನ್ನು ಮಾಡುತ್ತಾ ಬಂದಿದ್ದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದು ಒಳ್ಳೆಯದೇ ಆಯಿತು ಎಂದು ಸಲ್ಮಾನ್ ನಡೆಯನ್ನು ಬೆಂಬಲಿಸಿದ್ದರು. ಆ ನಂತರ ಕೆಆರ್ಕೆ ಮತ್ತು ಮಿಖಾ ನಡುವೆ ಮಾತಿನ ಯುದ್ಧವೇ ನಡೆದಿತ್ತು. ಇದೀಗ ಕೆಆರ್ಕೆ ಮತ್ತು ಸಲ್ಮಾನ್ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಹಳೆಯ ಕಥೆಗೆ ಎಳ್ಳು-ನೀರು ಬಿಟ್ಟು ಹೊಸ ಚಿತ್ರದತ್ತ ರವಿ ಶ್ರೀವತ್ಸ …
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಬಾಲಿವುಡ್ನ ಗೂಂಡಾ ಭಾಯ್, ನಿನಗೆ ತಾಖತ್ತಿದ್ದರೆ ಎದುರಿಗೆ ಬಂದು ಯುದ್ಧ ಮಾಡು. ಅದು ಬಿಟ್ಟು ಯಾರ್ಯಾರದೋ ಹಿಂದೆ ಬಚ್ಚಿಟ್ಟುಕೊಂಡು ಯುದ್ಧ ಮಾಡಬೇಡ. ಇಷ್ಟೆಲ್ಲ ಆದ ಮೇಲೆ, ಒಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಇನ್ನು ನಿನ್ನ ವೃತ್ತಿಜೀವನ ಸರ್ವನಾಶ ಮಾಡುವುದೇ ಬಿಡುವುದಿಲ್ಲ. ನಿನ್ನ ಕೆರಿಯರ್ ಹಾಳು ಮಾಡಿ, ಟಿವಿ ನಟನನ್ನಾಗಿ ಮಾಡುವುದು ಖಂಡಿತಾ’ ಎಂದು ಕೆಆರ್ಕೆ ಹೇಳಿಕೊಂಡಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ 60 ಕೋಟಿಯ ಮನೆ ಖರೀದಿಸಿದ ಅಜಯ್ ದೇವಗನ್!