ಬೆಂಗಳೂರು: ಕೃಷಿ ತಾಪಂಡ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಹಲವು ದಿನಗಳೇ ಆಗಿವೆ. ‘ಬ್ಲಾಂಕ್’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗುವ ಸೂಚನೆ ಇದೆ.
ಇದನ್ನೂ ಓದಿ: ಪಾತ್ರ ಮಾಡಿದ್ದಷ್ಟೇ ಅಲ್ಲ, ಕನ್ನಡದಲ್ಲಿ ಮಾತಾಡಿದ್ರಂತೆ ಬಾಬು …
ಏನಿದು ‘ಬ್ಲಾಂಕ್’? ಇಂಥದ್ದೊಂದು ಪ್ರಶ್ನೆ ಬರುವುದು ಸಹಜ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಂತೆ. ಜಯ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರೇ ಈ ಚಿತರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಫೆಲಿಸಿಟಿ ಫಿಲಂಸ್ನಡಿ ಈ ಚಿತ್ರವನ್ನು ಮಂಜುನಾಥ್ ಪ್ರಸನ್ನ ಎನ್ನುವವರು ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ, ಜಯ್ ಮತ್ತು ತಂಡದರು ಸದ್ದಿಲ್ಲದೆ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ತುಮಕೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿದಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರ ನೋಡಿ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ, ಬಿಡುಗಡೆಯ ಪ್ಲಾನ್ ಹೊರಬೀಳಲಿದೆ.
ಇದನ್ನೂ ಓದಿ: 18 ರಾಷ್ಟ್ರಗಳಲ್ಲಿ ಶಾರುಖ್- ಕಾಜೋಲ್ ‘ಡಿಡಿಎಲ್ಜೆ’ ಸಿನಿಮಾ ಮರು ಬಿಡುಗಡೆ
ಕೃಷಿ ತಾಪಂಡ ಜತೆಗೆ ಪೂರ್ಣಚಂದ್ರ ಮೈಸೂರು, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಜೆ.ಪಿ.ಮ್ಯಾನ್ ಅವರ ಛಾಯಾಗ್ರಹಣ ಮತ್ತು ಶ್ರೀಶಾಸ್ತ ಅವರ ಸಂಗೀತ ಈ ಚಿತ್ರಕ್ಕಿದೆ.