ಬೆಂಗಳೂರು: ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಚಿತ್ರರಂಗದ ಅನೇಕರು ಸೋಂಕಿಗೆ ತುತ್ತಾಗಿರುವ ವರದಿಗಳು ಹರಿದಾಡುತ್ತಿವೆ. ನಟನೆ ಮೂಲಕ ಕಮಾಲ್ ಮಾಡಿರುವ ನಟ ಕೋಮಲ್ ಕರೊನಾ ಸೋಂಕಿಗೆ ತುತ್ತಾಗಿದ್ದ ಮಾಹಿತಿ ಇದೀಗ ಹೊರಬಿದ್ದಿದೆ. ಸದ್ಯ ಅವರು ಪ್ರಾಣಾಪಾಯದಿಂದ ಬಚಾವಾಗಿದ್ದು, ಅವರು ಬಚಾವಾಗುವುದಕ್ಕೆ ಕಾರಣ ಏನು ಎನ್ನುವುದನ್ನು ಅವರ ಅಣ್ಣ ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.
“ನಾನು ಇಷ್ಟು ದಿನ ಅದೆಷ್ಟು ಯಾತನೆಯನ್ನು ಬಚ್ಚಿಟ್ಟುಕೊಂಡೇ ನೋವನುಭವಿಸಿದ್ದೆ ಎನ್ನುವುದು ರಾಯರಿಗೆ ಮಾತ್ರ ಗೊತ್ತು! ಭಕ್ತನ ಮತ್ತು ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ! ಅದು ಒಂದೇ.. ರಾಯರೇ.. ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗು ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆಯದಿದ್ದರೆ, ನೊಂದವರಿಗೆ ಮತ್ತು ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ ತಾಯಿಯನ್ನು ನೋಯಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನಕೊಟ್ಟ ಶಾರದೆಯ ಸೇವೆಯನ್ನು ನಿಷ್ಟೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲ ಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದಿದ್ದೇ ಹೌದಾದರೆ ಇದೀಗ ಸಾವಿನ ಮನೆ ಕದವನ್ನು ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಬೇಕು ಎಂದು ರಾಯರಲ್ಲಿ ಬೇಡಿಕೊಂಡಿದ್ದೆ” ಎಂದು ಜಗ್ಗೇಶ್ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ನನ್ನ ಬೇಡಿಕೆಗೆ ಸ್ಪಂದಿಸಿದ ರಾಯರು, ಬೃಂದಾವನದಿಂದ ಎದ್ದು ಬಂದು ನನ್ನ ತಮ್ಮನ ಪಕ್ಕ ನಿಂತು ಅವನ ಉಳಿಸಿಬಿಟ್ಟರು! ಈಗ ಕೋಮಲ್ ಸುರಕ್ಷಿತವಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
“ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು, ಬೆಂಗಳೂರಿನ ಕಾರ್ಪೊರೇಷನ್ನಲ್ಲಿ ಸ್ವಂತ ವ್ಯವಹಾರ ಶುರುಮಾಡಿ ಯಶಸ್ವಿಯಾದ! ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು! ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕರೊನಾ ಮಾರಿ ಮೈಸೇರಿ ತುಂಬ ಸೀರಿಯಸ್ ಆಗಿಬಿಟ್ಟ! ನಾನು ಎಲ್ಲರಿಂದ ಈ ವಿಚಾರ ಮುಚ್ಚಿಟ್ಟು ಅಣ್ಣನಾಗಿ ಅವನ ಜೀವ ಉಳಿಸಿಕೊಂಡ ಕಷ್ಟ ದೇವರಿಗೆ ಗೊತ್ತು. ಅವನಿಗೆ ಸಹಾಯಮಾಡಿದ ಡಾಕ್ಟರ್ ಮಧುಮತಿ, ಡಾಕ್ಟರ್ ಲಲಿತ ಮತ್ತು ನರ್ಸ್ಗಳ ಪಾದಕ್ಕೆ ನನ್ನ ನಮನ” ಎಂದು ಅವರು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)
ನಾನು ಇಷ್ಟುದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ
ಮಾತ್ರ ಗೊತ್ತು!ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ!ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ,ಯಾರಿಗು pic.twitter.com/VHBStldDIM— ನವರಸನಾಯಕ ಜಗ್ಗೇಶ್ (@Jaggesh2) April 27, 2021
ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಕರೊನಾ ಪಾಸಿಟಿವ್
19 ವರ್ಷದ ಮಗಳ ಹೆಣವನ್ನು ಬೈಕ್ನಲ್ಲೇ ಹೊತ್ತೊಯ್ದ ಅಪ್ಪ! ಕಣ್ಣೀರು ತರಿಸುತ್ತೆ ಈ ತಂದೆಯ ಕಥೆ