More

    ಮಡಿಕೇರಿಯೊಲ್ಲೊಬ್ಬ ವಿಕೃತಕಾಮಿ: ಮೃತದೇಹಗಳ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದೇ ಈತನ ಚಾಳಿ

    ಕೊಡಗು: ಮಡಿಕೇರಿಯ ಮಡಿಕಲ್​ ಕಾಲೇಜು ಆಸ್ಪತ್ರೆಯ ಡಿ ಗ್ರೂಪ್​ ನೌಕರನ ಕರಾಳ ಮುಖವಾಡವೊಂದು ಬಯಲಾಗಿದೆ. ನೌಕರನು ವಿಕೃತಕಾಮಿಯಾಗಿದ್ದು, ಮೃತರಾಗುವ ಯುವತಿ ಮತ್ತು ಯುವಕರ ಮೃತದೇಹದ ಬೆತ್ತಲೆ ಫೋಟೋ ತೆಗೆದು ಸಂಭ್ರಮಿಸುವುದು ಈತನ ಚಾಳಿಯಾಗಿತ್ತು.

    ಆರೋಪಿ ನೌಕರನ ಹೆಸರು ಸೈಯದ್​. ಈತ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ. ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು ಇಟ್ಟುಕೊಳ್ಳುತ್ತಿದ್ದ. ಇದೀಗ ಆತನ ಮೊಬೈನಲ್ಲಿದ್ದ ಎಲ್ಲ ವಿಡಿಯೋ ಮತ್ತು ಆಡಿಯೋ ಲಭ್ಯವಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಪರಾರಿಯಾಗಿದ್ದಾನೆ.

    ಆರೋಪಿ ಸೈಯದ್​ ಕೋವಿಡ್ ಸಂದರ್ಭದಲ್ಲಿ ಕರ್ತವ್ಯಕ್ಕೆ ನೇಮಕವಾಗಿದ್ದ. ಇದೀಗ ಆತನ ವಿರುದ್ಧ ಹಿಂದೂ ಜಾಗರಣ ವೇದಿಕೆ, ಮೆಡಿಕಲ್ ಕಾಲೇಜಿನ ಡೀನ್​ಗೆ ದೂರು ನೀಡಿದ್ದಾರೆ. ಬಳಿಕ ಮೆಡಿಕಲ್ ಕಾಲೇಜಿನ ಡೀನ್, ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…

    ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!

    ದೆಹಲಿ ಅಬಕಾರಿ ನೀತಿ ಪ್ರಕರಣ: ಹೈದರಾಬಾದ್​ ಮೂಲದ ಔಷಧ ಕಂಪನಿಯ ನಿರ್ದೇಶಕರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts