ನವದೆಹಲಿ: ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹಲವು ನಿಯಮಗಳನ್ನು ರೂಪಿಸಿರಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ತೆರಳುತ್ತಿರುವ ದೇಶದ ವೀಸಾ ನಿಯಮಗಳ ಬಗ್ಗೆ ಗೊತ್ತಿರಲೇಬೇಕು. ಇಲ್ಲದಿದ್ದರೆ ದೇಶವನ್ನು ಪ್ರವೇಶಿಸಲು ಬಿಡದೇ ವಿಮಾನ ನಿಲ್ದಾಣದಿಂದಲೇ ನಿಮ್ಮ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ.
ಇದೀಗ, ಇದೇ ನಿಯಮ ರೈಲು ಪ್ರಯಾಣಕ್ಕೂ ಅನ್ವಯವಾಗುತ್ತಿದೆ…! ಹೌದು ರೈಲ್ವೆ ಪ್ರಯಾಣ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ ಎನಿಸಿದೆ. ನೀವು ಯಾವ ರಾಜ್ಯಕ್ಕೆ ತೆರಳುತ್ತಿದ್ದೀರೋ ಅಲ್ಲಿನ ಕ್ವಾರಂಟೈನ್ ಪ್ರೊಟೊಕಾಲ್ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ; ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್ ಕೋಡ್ ಟಿಕೆಟ್, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್
ಏನಿದು ಕ್ವಾರಂಟೈನ್ ಪ್ರೊಟೊಕಾಲ್?: ಸದ್ಯ ಕೋವಿಡ್ ಸಂಕಷ್ಟದಿಂದ ಪಾರಾಗಲು ಕೇಂದ್ರದ ಮಾರ್ಗಸೂಚಿ ಅನ್ವಯ ಆಯಾ ರಾಜ್ಯಗಳು ಪ್ರತ್ಯೇಕ ಕ್ವಾರಂಟೈನ್ ನಿಯಮಗಳನ್ನು ರೂಪಿಸಿವೆ. ಬೇರೆ ರಾಜ್ಯಕ್ಕೆ ತೆರಳಿದಾಗ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಇರಬೇಕಾಗುತ್ತದೆ. ಈ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಕೆಲವೆಡೆ ವಿನಾಯ್ತಿ ನೀಡಲಾಗಿದೆ. ಹೀಗೆ ಹಲವು ನಿಯಮಗಳಿವೆ. ಆನ್ಲೈನ್ನಲ್ಲಿ ರೈಲು ಟಿಕೆಟ್ ಬುಕಿಂಗ್ ಆರಂಭಿಸಿದಾಗ ಕೋವಿಡ್-19 ಎಚ್ಚರಿಕೆ ತೆರೆದುಕೊಳ್ಳುತ್ತದೆ. ಅದರಲ್ಲಿನ ನಿಯಮಗಳನ್ನು ತಿಳಿದುಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಕೆಲ ಪ್ರಯಾಣಿಕರು ಕ್ವಾರಂಟೈನ್ಗೆ ಒಪ್ಪದ ಕಾರಣ ಮರಳಿ ದೆಹಲಿಗೆ ಕಳುಹಿಸಲಾಗಿತ್ತು. ಹೀಗಾಗಿ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ; ಲಾಕ್ಡೌನ್ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್ಮೆಂಟ್?
ಇದಲ್ಲದೇ, ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಸ್ಮಾರ್ಟ್ಫೋನಿನಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದಿರುವುದು ಕಡ್ಡಾಯವಾಗಿದೆ. ಸದ್ಯ ರೈಲಿನಲ್ಲಿ ಐಆರ್ಸಿಟಿಸಿ ವತಿಯಿಂದ ಆಹಾರ ಪೂರೈಕೆ ವ್ಯವಸ್ಥೆಯಿರುವುದಿಲ್ಲ. ಇದಲ್ಲದೇ, ಹೊದಿಕೆ, ಊಟದ ವ್ಯವಸ್ಥೆ ಇರುವುದಿಲ್ಲ. ಇದನ್ನೆಲ್ಲ ಪ್ರಯಾಣಿಕರೇ ಹೊಂದಿಸಿಕೊಳ್ಳುವುದು ಪ್ರಯಾಣಿಕರದ್ದೇ ಜವಾಬ್ದಾರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸದ್ಯ ದೇಶಾದ್ಯಂತ ರಾಜಧಾನಿ ಎಕ್ಸಪ್ರೆಸ್ ಮಾದರಿಯ ವಿಶೇಷ ರೈಲುಗಳಷ್ಟೇ ಸಂಚರಿಸುತ್ತಿವೆ. ಜೂನ್ 30ರವರೆಗೆ ಮಾಡಲಾಗಿದ್ದ ಎಲ್ಲ ಸಾಮಾನ್ಯ ಪ್ರಯಾಣಿಕ ರೈಲುಗಳ ಮುಂಗಡ ಟಿಕೆಟ್ಗಳನ್ನು ರದ್ದು ಮಾಡಲಾಗಿದ್ದು, ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುತ್ತಿದೆ.
ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ