More

    ನನ್ನ-ಕಿಮ್ಮನೆ ನಡುವೆ ಟಿಕೆಟ್‌ಗಾಗಿ ಶೀತಲ ಸಮರ; ಮಂಜುನಾಥ ಗೌಡ ಸ್ಪಷ್ಟನೆ

    ಶಿವಮೊಗ್ಗ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ನನ್ನ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡುವೆ ಟಿಕೆಟ್‌ಗಾಗಿ ಶೀತಲ ಸಮರವಿದೆಯೇ ವಿನಾ ವೈಯಕ್ತಿಕ ಕಾರಣಕ್ಕಲ್ಲ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಸ್ಪಷ್ಟಪಡಿಸಿದರು.
    ತೀರ್ಥಹಳ್ಳಿಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆಂದು ಆರಂಭದಿಂದಲೂ ಹೇಳಿದ್ದೇನೆ. ಶೀತಲ ಸಮರ ಇರುವುದು ನಿಜ. ಆದರೆ ಅದು ಟಿಕೆಟ್‌ಗಾಗಿ ಅಷ್ಟೇ. ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಸಹಜವಾಗಿಯೇ ಹಬ್ಬಿದೆ. ತೀರ್ಥಹಳ್ಳಿಯೂ ಸೇರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಗಳಿಸಲಿದೆ. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ. ಬಿಜೆಪಿ ಆಡಳಿತದಿಂದ ಜನರು ರೋಸಿಹೋಗಿದ್ದಾರೆ ಎಂದರು.
    ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಕರಘಟ್ಟ ರಮೇಶ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ರಾಹುಲ್ ಎಂಬ ಹೊಸ ನಾಯಕನ ಸೃಷ್ಟಿಯಾಗಿದೆ. ಅವರ ಅಂತಃಕರಣದ ಮಾತುಗಳು ಮಾನವೀಯತೆ ಬೆಸೆಯುವುದರ ಜತೆಗೆ ಒಡೆದ ಮನಸ್ಸುಗಳನ್ನು ಜೋಡಿಸಿ ಮತಗಳನ್ನು ಕ್ರೋಡೀಕರಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts