More

    “ನನ್ನ ಜಾತಿ ಮೇಲೂ ಹಲ್ಲೆ ನಡೆದಿದೆ,ಆದರೆ..”: ಜಗದೀಪ್ ಧನ್ಖರ್ ‘ಅವಮಾನ’ಕ್ಕೆ ಖರ್ಗೆ ಪ್ರತಿಕ್ರಿಯೆ

    ನವದೆಹಲಿ: ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಪಡಿಸಿದ್ದನ್ನು ವಿರೋಧಿಸಿ ಹೊಸ ಸಂಸತ್​ ಭವನದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸುವ ಸಂದರ್ಭ ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಖರ್ ಅವರನ್ನು ಅಣಕಿಸಿದ್ದರ ವಿರುದ್ಧ ಆಡಳಿತಾರೂಢ ಬಿಜೆಪಿ ಪ್ರತಿಭಟನೆ ಮುಂದುವರಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶಾಂತವಾಗಿರಲು ರಾಜಕೀಯ ನಾಯಕರಿಗೆಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?
    ಮಂಗಳವಾರ ಮಧ್ಯಾಹ್ನ ಬ್ಯಾನರ್ಜಿ ಅಣಕಿಸಿದ್ದು, “ವೈಯಕ್ತಿಕ ದಾಳಿ ಮತ್ತು ರೈತ ಅಥವಾ ಜಾಟ್ ಸಮುದಾಯದ (ಉಪರಾಷ್ಟ್ರಪತಿ ಸಮುದಾಯ) ವಿರುದ್ಧ ಮಾಡಿದ ಅವಮಾನ” ಎಂದು ಧನ್ಖರ್ ಅವರು ಹೇಳಿದ್ದಕ್ಕೆ ಬುಧವಾರ ಪ್ರತಿಕ್ರಿಯಿಸಿದ ಖರ್ಗೆ, ಈ ರೀತಿ ಮಾತನಾಡಬಾರದು. ಜನರನ್ನು ಪ್ರಚೋದಿಸುವುದನ್ನು ಬಿಡಬೇಕು. ಪ್ರತಿಯೊಂದು ವಿಚಾರದಲ್ಲೂ ಜಾತಿ ಎಳೆದು ತಂದು ಜನರನ್ನು ಕೆರಳಿಸಬಾರದು ಎಂದಿದ್ದಾರೆ.

    ನನಗೆ ಮಾತನಾಡಲು ಅವಕಾಶ ನೀಡದಿದ್ದರೆ ನಾನು ದಲಿತ ಎಂಬ ಕಾರಣಕ್ಕೆ ಹೀಗೆ ಮಾಡಿದರು ಎಂದು ಹೇಳಬೇಕೇ? ನನ್ನ ಮೇಲೂ ಸಮುದಾಯದ ಹೆಸರಲ್ಲಿ ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ ಆದರೆ ನಾನು ಏನನ್ನೂ ಹೇಳುವುದಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.
    ಸಂಸತ್​ನ ಹೊರಗೆ ಪ್ರತಿಭಟನೆ ನಡೆದಿದ್ದಕ್ಕೆ ಸದನದಲ್ಲಿ ನಿರ್ಣಯ ಅಂಗೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಸತ್ತಿನಲ್ಲಿ ಸದಸ್ಯರ ಅಮಾನತು ಕ್ರಮ ಸರಿಯಲ್ಲ. ಅವರು ಈ ವಿಷಯದಲ್ಲಿ ನಿಯಮಗಳನ್ನು ಅನುಸರಿಸಿಲ್ಲ, ಅಮಾನತುಗೊಂಡವರನ್ನು ಮತ್ತೆ ಕರೆಯಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

    ಪ್ರತಿಪಕ್ಷಗಳು “ಯಾರನ್ನೂ ಅವಮಾನಿಸಲು ಬಯಸುವುದಿಲ್ಲ”. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಮಾತ್ರ ಬಯಸುತ್ತವೆ ಎಂದು ಅವರು ಒತ್ತಿ ಹೇಳಿದರು.

    ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಧನ್ಖರ್ ಅವರ ಅನುಕರಣೆ ಮಾಡಿದ್ದಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬ್ಯಾನರ್ಜಿ ಈ ರೀತಿ ಅನುಕರಣೆ ಮಾಡುತ್ತಿರುವಾಗ ರಾಹುಲ್ ಗಾಂಧಿ ಆ ಘಟನೆಯನ್ನು ಚಿತ್ರೀಕರಿಸಿದ್ದರು. ಇದಕ್ಕೂ ಬಿಜೆಪಿ ವಾಗ್ದಾಳಿ ನಡೆಸಿದೆ. ಬುಧವಾರ ಬೆಳಗ್ಗೆ ರಾಜ್ಯಸಭೆಯಲ್ಲಿ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಸದರು ಧನ್ಖರ್ ಅವರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
    ಸಂಸತ್ ನಲ್ಲಿ ವಿಪಕ್ಷ ಸಂಸದರ ಸಾಮೂಹಿಕ ಅಮಾನತುಗಳ ನಂತರ ಸಂಸದರು ಬಹುತೇಕ ಎಲ್ಲರೂ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳಿಂದ ಬಂದವರು. ಹೀಗಾಗಿ ಬ್ಯಾನರ್ಜಿ ಅವರ ಕ್ರಮಗಳನ್ನು “ಬಲವಾಗಿ ಖಂಡಿಸುತ್ತಾರೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

    ಸಂಪತ್ತು ಗಳಿಕೆಯಲ್ಲಿ ಅಂಬಾನಿ, ಅದಾನಿಯನ್ನೇ ಹಿಂದಿಕ್ಕಿದ್ದಾರೆ ಭಾರತದ ಈ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts