ಈಗಾಗಲೇ ಹಲವು ರಾಜಕೀಯ ನಾಯಕರ ಜೀವನ ತೆರೆಮೇಲೆ ಸಿನಿಮಾ ಆಗಿ ತೆರೆಗೆ ಬಂದಿವೆ. ಒಂದಷ್ಟು ಮೆಚ್ಚುಗೆ ಪಡೆದುಕೊಂಡರೆ ಮತ್ತೆ ಕೆಲವು ಪ್ಲಾಪ್ ಪಟ್ಟಿ ಸೇರಿವೆ. ಇದೀಗ ಈ ಹಿಂದೆಯೇ ಸುದ್ದಿಯಲ್ಲಿದ್ದ ತೆಲಂಗಾಣ ಸಿಎಂ ಟಿಆರ್ಎಸ್ ಪಾರ್ಟಿಯ ಕೆಸಿಆರ್ ಜೀವನ ಕಥೆ ಸಿನಿಮಾ ರೂಪ ಪಡೆದುಕೊಳ್ಳಲಿದೆಯಂತೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಲಾಭ! ಹೊಸ ಬ್ಯುಸಿನೆಸ್ ಶುರು ಮಾಡಿದ ವರಲಕ್ಷ್ಮೀ
ಅಂದಹಾಗೆ, ಕಳೆದ ಎರಡು ವರ್ಷದ ಹಿಂದೆಯೇ ಕೆಸಿಆರ್ ರಾಜಕೀಯ ಜೀವನವನ್ನು ಸಿನಿಮಾ ಮಾಡುವುದಾಗಿ ನಿರ್ದೇಶಕ ಶ್ರೀಧರ್ ರೆಡ್ಡಿ ಹೇಳಿಕೊಂಡಿದ್ದರು. ಎಲ್ಲರೆದುರು ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಆದರೆ, ಇದೀಗ ಎರಡು ವರ್ಷದ ಬಳಿಕ ಮತ್ತೆ ಸಿನಿಮಾ ಶುರುವಾಗಲಿದೆಯಂತೆ.
ಇದನ್ನೂ ಓದಿ: ಇಲ್ಲಿ ಬೆಳೆಯುವುದು ಸುಲಭವಲ್ಲ
ಇತ್ತೀಚೆಗಷ್ಟೇ ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರಿಧರ್ ರೆಡ್ಡಿ, ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರಂತೆ. ‘ಕೆಸಿಆರ್ ಕುರಿತ ಸಿನಿಮಾ ಮಾಡುವುದು ನನ್ನ ಕನಸು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಪ್ಲ್ಯಾನ್ ಇದೆ. 20 ಕೋಟಿ ವೆಚ್ಚದಲ್ಲಿ ಸಿದ್ದವಾಗಲಿರುವ ಈ ಸಿನಿಮಾ ತೆಲಂಗಾಣದ ಪ್ರತಿ ಪ್ರಜೆಯೂ ಹೆಮ್ಮೆ ಪಡಬೇಕು ಆ ರೀತಿಯಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದಿದ್ದಾರೆ.
ಆ ಬಗ್ಗೆ ನನಗಿನ್ನೂ ಪಾಪಪ್ರಜ್ಞೆ ಇದೆ … ಅನಂತ್ ನಾಗ್ ಕಂಡಂತೆ ಎಂ.ಎಸ್. ಸತ್ಯು