More

    ಅಕ್ಷಯ್​ಗೆ ರಾಖಿ ಕಟ್ತೀನಿ ಅಂತ ಹೋಗಿದ್ದರಂತೆ ಕತ್ರೀನಾ … ಆಮೇಲೇನಾಯ್ತು ಗೊತ್ತಾ?

    ಮುಂಬೈ: ಬಾಲಿವುಡ್​ನ ಜನಪ್ರಿಯ ತಾರಾಜೋಡಿಗಳ ಪೈಕಿ ಅಕ್ಷಯ್​ ಕುಮಾರ್​ ಮತ್ತು ಕತ್ರೀನಾ ಕೈಫ್​ ಸಹ ಒಂದು. ಅವರಿಬ್ಬರೂ ‘ವೆಲ್ಕಮ್​’, ‘ನಮಸ್ತೇ ಲಂಡನ್​’, ‘ಸಿಂಗ್​ ಈಸ್​ ಕಿಂಗ್​’, ‘ಸೂರ್ಯವಂಶಿ’ ಮುಂತಾದ ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ತೆರೆಯ ಮೇಲೆ ಅಕ್ಷಯ್​ ಜತೆಗೆ ಪ್ರೇಮಿಯಾಗಿ, ಹೆಂಡತಿಯಾಗಿ ಅಭಿನಯಿಸಿದ್ದ ಕತ್ರೀನಾ, ಅದೊಮ್ಮೆ ಅಕ್ಷಯ್​ಗೆ ರಾಖಿ ಕಟ್ಟುವುದಕ್ಕೆ ಹೋಗಿದ್ದ ವಿಷಯ ಗೊತ್ತಾ?

    ಇದನ್ನೂ ಓದಿ: ಶಂಕರನ್​ ನಾಯರ್​ ಕುರಿತು ಕರಣ್​ ಜೋಹರ್​ ಬಯೋಪಿಕ್​ ನಿರ್ಮಾಣ

    ಗೊತ್ತಿಲ್ಲದಿದ್ದರೆ, ಇಲ್ಲಿ ಕೇಳಿ. ಈ ವಿಷಯವನ್ನು ಸ್ವತಃ ಕತ್ರೀನಾ ಕೈಫ್​ ಅದೊಮ್ಮೆ ‘ಕಾಫಿ ವಿಥ್​ ಕರಣ್​’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ‘ತೀಸ್​​ ಮಾರ್​ ಖಾನ್​’ ಚಿತ್ರದ ‘ಶೀಲಾ ಕೀ ಜವಾನಿ’ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಅವರು ಅಕ್ಷಯ್​ ಕುಮಾರ್​ಗೆ ರಾಖಿ ಕಟ್ಟುವುದಕ್ಕೆ ಹೋಗಿದ್ದರಂತೆ. ಆದರೆ, ಅಕ್ಷಯ್​ ಕುಮಾರ್​ ಕಟ್ಟಿಸಿಕೊಳ್ಳಲಿಲ್ಲವಂತೆ. ‘ಯಾಕೆ ಒದೆ ಬೇಕಾ?’ ಅಂತ ಕೇಳಿ ಹೊರಟುಹೋದರಂತೆ.

    ಈ ಕುರಿತು ಮಾತನಾಡಿದ್ದ ಅವರು, ‘ಈ ಜಗತ್ತಿನಲ್ಲಿ ನನಗೆ ಯಾರೂ ಇರಲಿಲ್ಲ. ನನ್ನ ಬಗ್ಗೆ ಯಾರೂ ಗಮನಹರಿಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ಆತ್ಮೀಯವಾಗಿದ್ದವರು ಅಕ್ಷಯ್​. ಹಾಗಾಗಿ, ಅವರಿಗೆ ರಾಖಿ ಕಟ್ಟಬೇಕೆನಿಸಿತು. ಹೋಗಿ ಕೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ ಕತ್ರೀನಾ.

    ಇದನ್ನೂ ಓದಿ: ತಾಪ್ಸಿ ಜತೆಗೆ ಬೋಲ್ಡ್​ ದೃಶ್ಯಗಳಲ್ಲಿ ನಟಿಸೋಕೆ ಹೀರೋಗಳೇ ಹೆದರಿದ್ದರಂತೆ!

    ಆಮೇಲೆ ಏನಾಯಿತು ಅಂತ ಕೇಳಿ? ಅದಕ್ಕೂ ಕತ್ರೀನಾ ಉತ್ತರಿಸಿದ್ದಾರೆ. ‘ಅಂದು ನನಗೆ ಬಹಳ ಬೇಸರವಾಗಿತ್ತು. ರಾತ್ರಿ ನನ್ನ ಫ್ರೆಂಡ್​ ಮನೆಗೆ ಹೊರಟಿದ್ದೆ. ಅಷ್ಟರಲ್ಲಿ ಎದುರಿಗೆ ಅರ್ಜುನ್​ ಕಪೂರ್​ ಬಂದರು. ಬಹಳ ಕ್ಯೂಟ್​ ಆಗಿದ್ದರು. ಸೀದಾ ಹೋಗಿ, ‘ಅರ್ಜುನ್​ ಇನ್ನು ಮುಂದೆ ನೀನು ನನ್ನ ರಾಖಿ ಸಹೋದರ’ ಎಂದೆ. ಅವನು ಓಡಿಹೋದ. ಮರುದಿನ ಮತ್ತೆ ಸಿಕ್ಕಿದ್ದ. ಆಗಲೂ ಅವನ ಹತ್ತಿರ ಹೋಗಿ ಇದೇ ವಿಷಯ ಪ್ರಸ್ತಾಪಿಸಿದೆ. ಆಗಲೂ ಓಡಿಹೋದ’ ಎಂದು ಹೇಳಿಕೊಂಡಿದ್ದಾರೆ ಕತ್ರೀನಾ.

    ಸದಾ ನಮ್ಮ ಹೃದಯದಲ್ಲಿ … ಫ್ರಾಂಕ್ಲಿನ್​ ಥಿಯೇಟರ್​ನಿಂದ ಸಂಚಾರಿ ವಿಜಯ್​ಗೆ ಗೌರವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts