ಬೆಂಗಳೂರು: ಕರ್ನಾಟಕ ಕಲಾದರ್ಶಿನಿ ನಡೆಸಿಕೊಟ್ಟ ಯಕ್ಷಗಾನ ಬೇಸಿಗೆ ಶಿಬಿರ-2023 ಸಮಾರೋಪ ಸಮಾರಂಭ ಬೆಂಗಳೂರಿನ ಗಿರಿನಗರದ ಶ್ರೀ ಮಹಾಗಣಪತಿ ದೇವಾಲಯ ಸಭಾಂಗಣದಲ್ಲಿ ನೆರವೇರಿತು.
ಯಕ್ಷಗಾನ ಪೂರ್ವರಂಗ, ಸಂಗೀತ ತರಬೇತಿಯನ್ನು ಯಕ್ಷಗುರು ಶ್ರೀನಿವಾಸ ಸಾಸ್ತಾನ, ಗೌತಮ್ ಸಾಸ್ತಾನ ಮತ್ತು ಡಾ. ಸುಪ್ರೀತ ನಡೆಸಿಕೊಟ್ಟರು. ಬಳಿಕ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನದಲ್ಲಿ ತಂಡದ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ ಕಾಳಗ ಮತ್ತು ಶಿಬಿರಾರ್ಥಿ ಪುಟಾಣಿಗಳಿಂದ ‘ವೀರ ಅಭಿಮನ್ಯು’ ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಾಯಿತು. ಇದನ್ನೂ ಓದಿ: ಯಾರೇ ಸೇರಿಕೊಂಡರೂ ಸ್ವಂತ ಬಲ ಇದ್ದರೆ ಸಿದ್ದರಾಮಯ್ಯ ಗೆಲ್ಲುತ್ತಾರೆ: ಸಿಎಂ ಬೊಮ್ಮಾಯಿ
ಶನಿವಾರ (15/4/2022) ನಡೆದ ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ದೀಕ್ಷಾಭಟ್, ಆದರ್ಶ ಶೆಟ್ಟಿ, ಶ್ರೀಹರಿ ಸರಳಾಯ, ಸುಧನ್ವ ಭಟ್, ಧೃತಿ ಅಮ್ಮೆಂಬಳ, ಶ್ರೇಯಸ್ ಸರಳಾಯ, ರಘುವೀರ ಪಾಂಗಣ್ಣಾಯ, ಅಭಿಶ್ರೀ ವಿವಿಧ ಪಾತ್ರಗಳಲ್ಲಿ ರಂಜಿಸಿದರು.
ಮರುದಿನ ನಡೆದ ಶಿಬಿರಾರ್ಥಿ ಪುಟಾಣಿಗಳು ನಡೆಸಿಕೊಟ್ಟ ವೀರ ಅಭಿಮನ್ಯು ಯಕ್ಷಗಾನದಲ್ಲಿ ಸೃಷ್ಟಿ ಚೇತನ್ ಜಯಂತ, ಆಯುಷ್ ಎಸ್, ಸಾಯಿ ಪ್ರಣಾಮ್, ಕೃಷ್ಣ ಭಟ್, ಕೃತಿ ಅಮ್ಮೆಂಬಳ, ಇಶಾನಿ ಎಸ್, ಶ್ರೇಷ್ಠಾ ಚೇತನ್ ಜಯಂತ, ಶ್ರೇಯಸ್ ಸರಳಾಯ, ಶ್ರೀವತ್ಸ ಸರಳಾಯ, ಅಭಿಶ್ರೀ ಶ್ರೀಹರ್ಷ ಭಟ್ಟ, ಧನುಶ್ ಶೆಟ್ಟಿ, ಸಮನ್ವಿತ, ಯಶ್ವಿತಾ, ಶ್ರೀಯಾ, ಯಾದವಿ, ಅಗಸ್ತ್ಯ, ಧನ್ವಿನ್, ವಿಶ್ರುತ್, ಧೃತಿ ಅಮ್ಮೆಂಬಳ ಬಾಲಕಲಾವಿದರಾಗಿ ಮಿಂಚಿದರು. ಇದನ್ನೂ ಓದಿ: ಕಾಂಗ್ರೆಸ್ನ ಅಂತಿಮ ಪಟ್ಟಿ ಪ್ರಕಟ: ಶಿಡ್ಲಘಟ್ಟ ಹಾಲಿ ಶಾಸಕ ಮುನಿಯಪ್ಪಗೆ ಟಿಕೆಟ್ ಮಿಸ್
ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ್ ಬಾಳೆಕುದ್ರು, ಚೆಂಡೆಯಲ್ಲಿ ಸುಬ್ರಹ್ಮಣ್ಯ ಸಾಸ್ತಾನ, ಮದ್ದಲೆಯಲ್ಲಿ ರಾಘವೇಂದ್ರ ಬಿಡುವಾಳ ಭಾಗವಹಿಸಿದ್ದರು. ಚೈತ್ರಾ ಕೋಟಾ ಅವರು ಕಾರ್ಯಕ್ರಮ ನಿರ್ವಹಿಸಿದರು.
ಕಾಂಗ್ರೆಸ್ನ ಅಂತಿಮ ಪಟ್ಟಿ ಪ್ರಕಟ: ಶಿಡ್ಲಘಟ್ಟ ಹಾಲಿ ಶಾಸಕ ಮುನಿಯಪ್ಪಗೆ ಟಿಕೆಟ್ ಮಿಸ್
ಕಾಂಗ್ರೆಸ್ ಐದನೇ, ಜೆಡಿಎಸ್ ಮೂರನೇ ಪಟ್ಟಿ ಬೆನ್ನಿಗೇ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ!
ರಂಜಾನ್ ಹಿನ್ನೆಲೆ ಯೆಮೆನ್ನಲ್ಲಿ ನಡೆದ ಚಾರಿಟಿ ಈವೆಂಟ್ನಲ್ಲಿ ಕಾಲ್ತುಳಿತ: 85 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ