ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಇದೀಗ ತನ್ನ ಅಂತಿಮ ಪಟ್ಟಿ ಪ್ರಕಟಿಸಿದೆ.
ಕೊನೆಯ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳು ಹಾಗೂ ಕ್ಷೇತ್ರಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಶಿಡ್ಲಘಟ್ಟದ ಹಾಲಿ ಶಾಸಕ ಮುನಿಯಪ್ಪಗೆ ಟಿಕೆಟ್ ಮಿಸ್ ಆಗಿದ್ದು, ಅವರ ಬದಲಿಗೆ ಬಿ.ವಿ. ರಾಜೀವ್ ಗೌಡ ಎಂಬುವರಿಗೆ ಟಿಕೆಟ್ ಸಿಕ್ಕಿದೆ.
ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ನಟಿ ಶ್ರುತಿ ಕೆನ್ನೆ ಹಿಂಡಿದ ಮಾಜಿ ಸಿಎಂ!
ಸಿವಿರಾಮನ್ ನಗರಕ್ಕೆ ಆನಂದಕುಮಾರ್, ಮಂಗಳೂರು ನಗರಕ್ಕೆ ಇನಾಯತ್ ಆಲಿ, ಅರಕಲ ಗೂಡಿಗೆ ಎಚ್.ಪಿ. ಶ್ರೀಧರ್ ಗೌಡ ಹಾಗೂ ರಾಯಚೂರಿಗೆ ಮೊಹಮ್ಮದ್ ಸಲಾಂ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರಕಿದೆ.
ಕಾಂಗ್ರೆಸ್ ತನ್ನ ಎಲ್ಲ ಅಭ್ಯರ್ಥಿಗಳನ್ನು ಘೋಷಿಸಿದ್ದು, ಭರ್ಜರಿ ಪ್ರಚಾರದತ್ತ ದೃಷ್ಟಿ ನೆಟ್ಟಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಒಟ್ಟು 224 ಸ್ಥಾನಗಳನ್ನು ಕರ್ನಾಟಕ ವಿಧಾನಸಭೆ ಹೊಂದಿದ್ದು, ಸರ್ಕಾರ ರಚನೆ ಮಾಡಲು 113 ಬಹುಮತ ಬೇಕಿದೆ. (ದಿಗ್ವಿಜಯ ನ್ಯೂಸ್)
ಕಾಂಗ್ರೆಸ್ ಐದನೇ, ಜೆಡಿಎಸ್ ಮೂರನೇ ಪಟ್ಟಿ ಬೆನ್ನಿಗೇ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ!
ಬಿಜೆಪಿ ಲಿಂಗಾಯತ ನಾಯಕರ ಸಭೆ; ಲಿಂಗಾಯತರೇ ಮುಂದಿನ ಸಿಎಂ ಅಂತ ಘೋಷಿಸಲು ಆಗ್ರಹ