ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 6 ಮತ್ತು 7ನೇ ಘಟಿಕೋತ್ಸವಕ್ಕೆ ಗುರುವಾರ ಬೆಳಗ್ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಜಾನಪದ ಕಲಾವಿದರ ಮೆರವಣಿಗೆಗೆ ಕುಲಪತಿ ಪ್ರೊ.ಟಿ.ಎ.ಭಾಸ್ಕರ್ ಚಾಲನೆ ನೀಡುತ್ತಿದ್ದಂತೆ ಘಟಿಕೋತ್ಸವದ ಸಂಭ್ರಮ ಗರಿಬಿಚ್ಚಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಗೊಂಬೆ ಕುಣಿತ, ಸಿದ್ದಿ ನೃತ್ಯ ಸೇರಿದಂತೆ ಮತ್ತಿತರ ಜಾನಪದ ನೃತ್ಯ ತಂಡಗಳು ಮನಸೆಳೆದವು.
ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ.ಎಂ.ಮೋಹನ ಆಳ್ವ, ಕುಲಸಚಿವರಾದ ಪ್ರಿ.ಸಿ.ಟಿ.ಗುರುಪ್ರಸಾದ, ಪ್ರೊ.ಎನ್.ಎಂ.ಸಾಲಿ, ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾದ ಆರು ಕಲಾವಿದರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಾಳು ಕೊಡ್ತೀನಿ… ಎಂದು ಪುಸಲಾಯಿಸಿ ಆಕೆಯ ಮನೆಯಲ್ಲೇ ಇದ್ದವ ಹೀಗಾ ಮಾಡೋದು? ಎಲ್ಲವನ್ನೂ ಕಳೆದುಕೊಂಡಾಕೆಯ ಗೋಳಿನ ಕಥೆ ಇದು