More

    ರಾಜ್ಯದಲ್ಲಿಂದು 1,990 ಕರೊನಾ ಪ್ರಕರಣ ಪತ್ತೆ; ಸತತ ಎರಡನೇ ದಿನವೂ ಶೂನ್ಯ ಪ್ರಕರಣ ದಾಖಲಿಸಿದ ಯಾದಗಿರಿ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದು, ಇಂದು ಒಟ್ಟು 1,990 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,76,587ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 45 ಸೋಂಕಿತರು ಕೊನೆಯುಸಿರೆಳೆದಿದ್ದು, ಒಟ್ಟಾರೆ ಮೃತರ ಸಂಖ್ಯೆ 35,989ಕ್ಕೆ ಏರಿಕೆಯಾಗಿದೆ.

    ಇಂದು 2,537 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ ಗುಣಮುಖರ ಸಂಖ್ಯೆ 28,06,933ಕ್ಕೆ ಹೆಚ್ಚಿದೆ. ಸದ್ಯ 33,642 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.59ರಷ್ಟಿದ್ದರೆ ಮರಣ ಪ್ರಮಾಣ ಶೇ. 2.26ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 400 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 219, ಮೈಸೂರು 211, ಹಾಸನ 175, ಬೆಳಗಾವಿ 140 ಮತ್ತು ಉತ್ತರ ಕನ್ನಡದಲ್ಲಿ 120 ಪ್ರಕರಣಗಳು ಕಾಣಿಸಿಕೊಂಡಿವೆ. ಯಾದಗಿರಿಯಲ್ಲಿ ಸತತ ಎರಡನೇ ದಿನವೂ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ, ಬೀದರ್, ಚಿತ್ರದುರ್ಗ, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಹೊಸ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ಬೆಂಗಳೂರಿನಲ್ಲಿಂದು 490 ಸೋಂಕಿತರು ಗುಣಮುಖರಾಗಿದ್ದು, 15,761 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. (ಏಜೆನ್ಸೀಸ್)

    ಕರಾವಳಿ, ಮಲೆನಾಡ ಜನರೇ ಎಚ್ಚರ! ಜುಲೈ 17ರಂದು ಸುರಿಯಲಿದೆ ಜಡಿ ಮಳೆ

    ಒಲಂಪಿಕ್ಸ್​ನಲ್ಲಿ ಗೆದ್ದರೆ ರಾಜ್ಯದಿಂದ ನಗದು ಬಹುಮಾನ; ಚಿನ್ನ ಗೆಲ್ಲುವವರಿಗೆ ₹5 ಕೋಟಿ, ಬೆಳ್ಳಿಗೆ ₹3 ಕೋಟಿ, ಕಂಚಿಗೆ ₹2 ಕೋಟಿ

    ಕರೊನಾದಿಂದ ಮೃತಪಟ್ಟ 10 ಸಾವಿರಕ್ಕೂ ಅಧಿಕ ಕೃಷಿಕರ ಸಾಲ ಮನ್ನಾಕ್ಕೆ ಚಿಂತನೆ: ಸಚಿವ ಎಸ್.ಟಿ ಸೋಮಶೇಖರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts