ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ 1,185 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,03,425ಕ್ಕೆ ಏರಿದೆ. ಒಂದೇ ದಿನ 1,594 ಮಂದಿ ಗುಣಮುಖವಾಗಿದ್ದು, ಗುಣಮುಖರ ಸಂಖ್ಯೆ 8,75,796ಕ್ಕೆ ಹಚ್ಚಳವಾಗಿದೆ. ಕೇವಲ 15,645 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.
ಇದನ್ನೂ ಓದಿ: VIDEO| ಯಾರದ್ದೋ ಕಾರ್ ರೇಸ್ಗೆ ಬಲಿಯಾದ ಯುವಕ! ಬೆಚ್ಚಿ ಬೀಳಿಸುತ್ತೆ ಈ ದೃಶ್ಯ
ಮಂಗಳವಾರ ಒಂದೇ ದಿನದಲ್ಲಿ 11 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 11,965ಕ್ಕೆ ಏರಿಕೆಯಾಗಿದೆ. 253 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಕ್ಕಳ ಮೆರವಣಿಗೆ ಮೇಲೆಯೇ ಚಲಿಸಿದ ಲಾರಿ! ನಾಲ್ವರು ಮಕ್ಕಳು ಬಲಿ, 12 ಜನರಿಗೆ ಗಾಯ
ಇಂದು ಬೆಂಗಳೂರಿನಲ್ಲಿ 673 ಹೊಸ ಪ್ರಕರಣ ವರದಿಯಾಗಿದೆ. ಈ ಮೂಲಕ ನಗರದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 3,79,571ಕ್ಕೆ ಏರಿದೆ. ಇದರಲ್ಲಿ 3,64,787 ಸೋಂಕಿತರು ಚೇತರಿಸಿಕೊಂಡಿದ್ದು, 4,241 ಮಂದಿ ಮೃತರಾಗಿದ್ದಾರೆ. 10,542 ಸಕ್ರಿಯ ಪ್ರಕರಣಗಳು ಬಾಕಿಯಿವೆ.
ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!
ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!