ನವದೆಹಲಿ: ವಿರಾಟ್ ಕೊಹ್ಲಿಯನ್ನು ತಂಡದಿಂದ ತೆಗೆದುಹಾಕಬೇಕು ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದ ಕಪಿಲ್ ದೇವ್ ಮತ್ತೆ ಕೊಹ್ಲಿಯನ್ನು ಕೆಣಕಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಇಲ್ಲದಿರುವುದನ್ನು ಸಮರ್ಥಿಸಿಕೊಂಡಿರುವ ಕಪಿಲ್ ದೇವ್, ಇದು ಸರಿಯಾದ ನಿರ್ಧಾರವಾಗಿದ್ದು, ಆಯ್ಕೆ ತಂಡ ವಿರಾಟ್ ಕೊಹ್ಲಿ ಅವರನ್ನು ವಿಶ್ರಾಂತಿಗಾಗಿ ಕಳುಹಿಸಿದ್ದರೂ ಸ್ವಾಗತಾರ್ಹ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಇದೀಗ ಕಪಿಲ್ ದೇವ್ ಅವರ ಈ ಹೇಳಿಕೆ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಈ ಹಿಂದೆ ಕೊಹ್ಲಿ ವಿರುದ್ಧ ಹೇಳಿಕೆ ನೀಡಿದ್ದ ಕಪಿಲ್ ದೇವ್ ಅವರಿಗೆ ನಾಯಕ ರೋಹಿತ್ ಶರ್ಮಾ ಸರಿಯಾದ ತಿರುಗೇಟು ನೀಡಿದ್ದರು.
ವೆಸ್ಟ್ಇಂಡೀಸ್ನ ಟಿ20 ಪ್ರವಾಸಕ್ಕೆ ಗುರುವಾರ ತಂಡದ ಸದಸ್ಯರ ಹೆಸರು ಘೋಷಿಸಿರುವ ಬಿಸಿಸಿಐ ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಹೆಸರು ಕೈ ಬಿಡಲಾಗಿದ್ದು, ಕಾರಣವನ್ನೂ ನೀಡಿಲ್ಲ. (ಏಜೆನ್ಸೀಸ್)
ಪಾಕ್ ಪತ್ರಕರ್ತನ ಜತೆ ಮಾಜಿ ಉಪರಾಷ್ಟ್ರಪತಿ ಅನ್ಸಾರಿ: ಫೋಟೋ ಸಮೇತ ಸಾಕ್ಷ್ಯಬಿಡುಗಡೆಗೊಳಿಸಿದ ಬಿಜೆಪಿ