ಕಂಪ್ಲಿ: ಪುರಂದರ ದಾಸರು ಕರ್ನಾಟಕ ಸಂಗೀತ ಪಿತಾಮಹರಾಗಿದ್ದು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಇಲ್ಲಿನ ಶ್ರೀವಾಸವಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಜು ಬಿಲಂಕರ್ ಹೇಳಿದರು.
ಇಲ್ಲಿನ ವಾಸವಿ ಶಾಲೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ಲಕ್ಷ್ಮೀದೇವಿ ಮತ್ತು ಭೋಜನಗೌಡ ಸ್ಮರಣಾರ್ಥ, ದಿ.ಶ್ರೀಗೋಳ್ನೇರು ಗಂಗಮ್ಮ ಸಿದ್ದಪ್ಪ ದತ್ತಿ ಕಾರ್ಯಕ್ರಮದಲ್ಲಿ ಪುರಂದರ ದಾಸರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಸಮಾಜ ಸುಧಾರಣೆಗೆ ಪುರಂದರದಾಸರು ಅವಿರತವಾಗಿ ಶ್ರಮಿಸಿದರು. ಸಮಾನತೆ, ಏಕತೆ ಪ್ರತಿಪಾದಿಸಿದ ದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದರು.
ಶಿಕ್ಷಕಿ ಎಸ್.ಉಮಾದೇವಿ ಶ್ರೀಅಲ್ಲಮರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ವಾಸವಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ವಿ.ರಾಮಲಿಂಗಯ್ಯ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಎಚ್.ಎನ್.ನಟರಾಜ, ಕಸಾಪ ಪದಾಧಿಕಾರಿಗಳಾದ ಕಾಳಿಂಗವರ್ಧನ ಹಾದಿಮನಿ, ಎಲಿಗಾರ ವೆಂಕಟರೆಡ್ಡಿ, ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್, ಶಿಕ್ಷಕರಾದ ವೆಂಕಟರೆಡ್ಡಿ, ಶಿಲ್ಪಾ, ಉಮಾದೇವಿ ಇತರರಿದ್ದರು.