More

    ‘ಶುಗರ್​ಲೆಸ್​’ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತವಾಯ್ತು …

    ಈ ಹಿಂದೆ ‘ಡಾಟರ್​ ಆಫ್​ ಪಾರ್ವತಮ್ಮ’ ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ ಪ್ರಜ್ವಲ್​ ಅಭಿನಯದ ‘ವೀರಂ’ ಚಿತ್ರವನ್ನು ನಿರ್ಮಿಸುತ್ತಿರುವ ಕೆ.ಎಂ. ಶಶಿಧರ್​, ಈ ಮಧ್ಯೆ ‘ಶುಗರ್​ಲೆಸ್​’ ಎಂಬ ಚಿತ್ರವನ್ನು ನಿರ್ದೇಶಿಸವುದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಸದ್ದಿಲ್ಲದೆ ಚಿತ್ರವನ್ನು ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ‘ವಿಷಕನ್ಯೆ ಇವಳು…ಭೂಗತಲೋಕದ ಸುಪಾರಿ ಕಿಲ್ಲರ್​…’: ಸಚಿವರ ಆರೋಪ

    ಇಂದು ಪ್ರಶಾಂತ್​ ನಗರದ ರಾಯರ ಮಠದಲ್ಲಿ ‘ಶುಗರ್​ಲೆಸ್​’ ಚಿತ್ರದ ಮುಹೂರ್ತವಾಗಿದೆ. ಚಿತ್ರವನ್ನು ಅರ್ಪಿಸುತ್ತಿರುವ ಪುಷ್ಕರ್​ ಮಲ್ಲಿಕಾರ್ಜುನಯ್ಯ, ನಾಯಕ ಪೃಥ್ವಿ ಅಂಬರ್​, ನಾಯಕಿ ಪ್ರಿಯಾಂಕಾ ತಿಮ್ಮೇಶ್​, ಧರ್ಮಣ್ಣ, ರಘು ರಾಮನಕೊಪ್ಪ ಸೇರಿದಂತೆ ಹಲವರು ಈ ಮುಹೂರ್ತದಲ್ಲಿ ಭಾಗವಹಿಸಿದ್ದಾರೆ. ನಟ-ನಿರ್ದೇಶಕ ಗುರುಪ್ರಸಾದ್​ ಅವರು ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದಾರೆ.

    ಈ ಕುರಿತು ಮಾತನಾಡುವ ಶಶಿಧರ್​, ‘ಚಿತ್ರವನ್ನು ಸೆಪ್ಟೆಂಬರ್​ 10ರಂದು ಪ್ರಾರಂಭಿಸುವುದಕ್ಕೆ ಯೋಚನೆ ಇತ್ತು. ಆದರೆ, ಆಗ ಪಿತೃಪಕ್ಷವಿರುವುದರಿಂದ, ಸಾಮಾನ್ಯವಾಗಿ ಹೊಸ ಚಿತ್ರಗಳ ಸೆಟ್ಟೇರುವುದಿಲ್ಲ. ಈಗ ಬಿಟ್ಟರೆ, ಇನ್ನೊಂದು ತಿಂಗಳು ಮುಹೂರ್ತಕ್ಕಾಗಿ ಕಾಯಬೇಕಾಗುತ್ತದೆ. ಅದೇ ಕಾರಣಕ್ಕೆ, ಚಿತ್ರದ ಮುಹೂರ್ತವನ್ನು ಸರಳವಾಗಿ ಮುಗಿಸಿದ್ದೇವೆ. ಸೆಪ್ಟೆಂಬರ್​ 10ರಿಂದ ಚಿತ್ರೀಕರಣ ಪ್ರಾರಂಭವಾಲಿದೆ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಸುಶಾಂತ್​ಗೇನೋ ರಹಸ್ಯ ಗೊತ್ತಿತ್ತು, ಅದಕ್ಕೆ ಕೊಲೆ ಆಯ್ತು … ಕಂಗನಾ ಹೊಸ ಬಾಂಬ್​

    ಯುವಕನೊಬ್ಬನಿಗೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಂದರೆ, ಅವನು ಅದನ್ನು ಏನೆಲ್ಲಾ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರವನ್ನು ಹಾಸ್ಯಮಯವಾಗಿ ಹೇಳಲಾಗುತ್ತದಂತೆ. ಚಿತ್ರವನ್ನು ನಿರ್ದೇಶಿಸುವುದುರ ಜತೆಗೆ ಶಶಿಧರ್​ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಪೃಥ್ವಿ, ಪ್ರಿಯಾಂಕಾ ಜತೆಗೆ ಧರ್ಮಣ್ಣ, ದತ್ತಣ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಅಂದಹಾಗೆ, ಈ ಚಿತ್ರವನ್ನು ಪುಷ್ಕರ್​ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವುದಷ್ಟೇ ಅಲ್ಲ, ವಿತರಣೆ ಸಹ ಮಾಡುತ್ತಿದ್ದಾರೆ.

    ಕಿತ್ತಾಡ್ತಿದ್ದ ವಿಜಯ್​-ಅಜಿತ್​ ಅಭಿಮಾನಿಗಳು ಒಂದಾದ್ರು … ಏನು ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts