More

    ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳಿಗೆ ಪೈರಸಿ ಕಾಟ: ಪೊಲೀಸ್ ಕಮಿಷನರ್‌ಗೆ ನಿರ್ಮಾಪಕರ ಸಂಘದ ದೂರು

    ಬೆಂಗಳೂರು: ಕರೊನಾ ಕಾಟದ ನಡುವೆ ಹೇಗೋ ಶೇ. 100 ಆಸನ ಭರ್ತಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಒಂದಷ್ಟು ಖುಷಿಯಲ್ಲಿದ್ದ ನಿರ್ಮಾಪಕರ ಖುಷಿಯನ್ನು ಪೈರಸಿ ಕಾಟ ಕಿತ್ತುಕೊಂಡಿದೆ. ಬಿಡುಗಡೆಗೆ ಸಜ್ಜಾಗಿರುವ ದೊಡ್ಡ ದೊಡ್ಡ ಸಿನಿಮಾಗಳಿಗೇ ಪೈರಸಿ ಭೂತ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘದವರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.

    ಕನ್ನಡದ ಹೊಸ ಸಿನಿಮಾಗಳ ಬಿಡುಗಡೆ ದಿನವೇ ಪೈರಸಿ ಕಾಪಿಗಳನ್ನು ಹಂಚಿಕೊಳ್ಳಲಿದ್ದೇವೆ ಎಂದು ಕೆಲವೊಂದು ಪೈರಸಿಗಾರರು ಟೆಲಿಗ್ರಾಮ್​ ಗ್ರೂಪ್​/ಚಾನೆಲ್​​ಗಳನ್ನು ಮಾಡಿಕೊಂಡು ಒಂಥರ ಧಮ್ಕಿ ಹಾಕಿರುವುದು ಹೊಸ ಸಿನಿಮಾಗಳ ನಿರ್ಮಾಪಕರಿಗೆ, ಚಿತ್ರತಂಡಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗೆ ಪೈರಸಿ ಬೆದರಿಕೆ ಒಡ್ಡಿರುವ 50ಕ್ಕೂ ಅಧಿಕ ಟೆಲಿಗ್ರಾಮ್​ ಗ್ರೂಪ್​/ಚಾನೆಲ್​ಗಳು ಸಕ್ರಿಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿರ್ಮಾಪಕರ ಸಂಘ ಪೊಲೀಸರ ಮೊರೆ ಹೋಗಿದೆ.

    ಇದನ್ನೂ ಓದಿ: ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಬಿದ್ದ ಮರ, ಚಾಲಕ ಸ್ಥಳದಲ್ಲೇ ಸಾವು; ಪ್ರಯಾಣಿಕ ಪ್ರಾಣಾಪಾಯದಿಂದ ಪಾರು…

    ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್​ಕುಮಾರ್​ ಅವರ ನೇತೃತ್ವದಲ್ಲಿ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಕೆ.ಮಂಜು, ಎ. ಗಣೇಶ್​, ರಮೇಶ್​ ಯಾದವ್ ಮುಂತಾವರು ಇಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಕೋಟಿಗೊಬ್ಬ-3, ಸಲಗ, ಭಜರಂಗಿ2 ಮುಂತಾದ ಬಿಗ್​ಬಜೆಟ್​ನ ಬಹುನಿರೀಕ್ಷಿತ ಸಿನಿಮಾಗಳು ಇನ್ನೇನು ಬಿಡುಗಡೆ ಆಗಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ದೂರು ನೀಡಲಾಗಿದೆ.

    ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳಿಗೆ ಪೈರಸಿ ಕಾಟ: ಪೊಲೀಸ್ ಕಮಿಷನರ್‌ಗೆ ನಿರ್ಮಾಪಕರ ಸಂಘದ ದೂರು
    ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ನಿರ್ಮಾಪಕರ ಸಂಘದಿಂದ ದೂರು.

    ‘ಮೋದಿ ಇರೋದ್ಕೆ ಅವನು ಬದ್ಕಿದಾನೆ’; ದುಷ್ಕರ್ಮಿಗಳ ಕಿಡಿಗೇಡಿತನ ಕಂಡು ಬಾಯಿಗೆ ಬಂದ ಹಾಗೆ ಬೈದ ಮಹಿಳೆ..

    ಅತ್ಯಾಚಾರ ಪ್ರಕರಣದಲ್ಲಿ 62 ವರ್ಷದ ವೃದ್ಧನಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು; 15 ವರ್ಷದ ಬಾಲಕಿ ಮೇಲೆ ನಡೆದಿದ್ದ ಬಲಾತ್ಕಾರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts