More

    ಮತ್ತೆ ಡೈರೆಕ್ಷನ್​ ಮಾಡೋಕೆ ರೆಡಿಯಾದ ಕಂಗನಾ …

    ಕಳೆದ ಮೂರು ತಿಂಗಳುಗಳಿಂದ ಸುಶಾಂತ್​ ಸಿಂಗ್​ ರಜಪೂತ್​, ನೆಪೋಟಿಸಂ, ಬಾಲಿವುಡ್​ ಮಾಫಿಯಾ ಎಂದು ಜಪ ಮಾಡುತ್ತಿದ್ದ ಕಂಗನಾ ರಣಾವತ್​, ಈಗ ಬಹಳ ದಿನಗಳ ನಂತರ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ಮಣಿಕರ್ಣಿಕಾ’ ಚಿತ್ರದ ನಂತರ ಕಂಗನಾ ನಿರ್ದೇಶಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಮೊದಲ ಬಾರಿಗೆ ಒಂದಿಷ್ಟು ವಿಷಯಗಳನ್ನು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?

    ಅಂದಹಾಗೆ, ಕಂಗನಾ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರೇನು ಗೊತ್ತಾ? ‘ಅಪರಾಜಿತ ಅಯೋಧ್ಯಾ’. ರಾಮಜನ್ಮ ಭೂಮಿ ವಿಷಯವನ್ನಿಟ್ಟುಕೊಂಡು ಕಂಗನಾ ಈ ಬಾರಿ ಚಿತ್ರ ಮಾಡುತ್ತಿದ್ದು, ‘ಬಾಹುಬಲಿ’ ಖ್ಯಾತಿಯ ವಿಜಯೇಂದ್ರ ಪ್ರಸಾದ್​ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿದ್ದಾರೆ.

    ಆಗಸ್ಟ್​ 5ರಂದು ಒಂದು ಸರಳ ಪೂಜೆಯೊಂದಿಗೆ ಚಿತ್ರದ ಕೆಲಸಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಅಂದು ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅತ್ತ ಅಯೋಧ್ಯೆಯಲ್ಲಿ ನಡೆದರೆ, ಇತ್ತ ಕಂಗನಾ ತಮ್ಮ ಊರಲ್ಲಿ ಒಂದು ಸರಳ ಪೂಜೆಯೊಂದಿಗೆ ಮಾಡಿ, ಚಿತ್ರದ ಕೆಲಸವನ್ನು ಪ್ರಾರಂಭಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ರಾಮ ಮಂದಿರ ಎನ್ನುವುದು ಬರೀ ದೇವಸ್ಥಾನವಲ್ಲ. ಅದೊಂದು ಎಮೋಷನ್. ಈ ದೇವಸ್ಥಾನದ ವಿಷಯವಾಗಿ ಆರು ಶತಮಾನಗಳ ಹೋರಾಟವಿದೆ. ಆರು ವರ್ಷಗಳ ಹಿಂದೆ ಶುರುವಾದ ಹೋರಾಟ, ಈಗ ದೇವಸ್ಥಾನದ ಶಂಕುಸ್ಥಾಪನೆಯವರೆಗೂ ಬಂದಿದೆ. ಇದೊಂದು ಬಹಳ ಕಷ್ಟವಾದ ಸ್ಕ್ರೀನ್​ಪ್ಲೇ. ಏಕೆಂದರೆ, 600 ವರ್ಷಗಳ ಇತಿಹಾಸವನ್ನು ಈ ಚಿತ್ರದಲ್ಲಿ ಹೇಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: VIDEO: 10 ಸಾವಿರ ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಫೇಸ್​ಬುಕ್​ ಲೈವ್​ ಬಂದು ಆತ್ಮಹತ್ಯೆಗೆ ಶರಣಾದ ನಟಿ!

    ಇನ್ನು ಅಗಸ್ಟ್​ ಐದರಂದೇ ಚಿತ್ರದ ಕೆಲಸಗಳು ಪ್ರಾರಂಭವಾಗಿರುವ ಬಗ್ಗೆ ಮಾತನಾಡಿ5ರುವ ಅವರು, ‘ಲೋಗೋ ಬಿಡುಗಡೆ ಮಾಡುವ ಮೂಲಕ ಕೆಲಸ ಶುರುವಾಗಿದೆ. ನಿಜ ಹೇಳಬೇಕೆಂದರೆ, ಇದು ನಮಗೆ ಬಹಳ ಒಳ್ಳೆಯ ದಿನ. ಸದ್ಯಕ್ಕೆ ವಿಜಯೇಂದ್ರ ಪ್ರಸಾದ್​ ಅವರು ಬರವಣಿಗೆ ಮುಗಿಸಿದ್ದು, ಇನ್ನು ಪ್ರೊಡಕ್ಷನ್​ ಕೆಲಸಗಳು ಶುರುವಾಗಬೇಕಿದೆ. ಚಿತ್ರವನ್ನು ನಾನೇ ನಿರ್ದೇಶಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಕಪಿಲ್​ ಶರ್ಮಾ V/s ಸುನೀಲ್​ ಗ್ರೋವರ್​; ಹೊಸ ಕಾಮಿಡಿ ಶೋ ಮೂಲಕ ಗುತ್ತಿ ಆಗಮನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts