ಕೋಲ್ಕತ: ಶಿವಸೇನಾ ನಾಯಕ ಸಂಜಯ್ ರಾವುತ್ ಗೆ ಫೇಸ್ಬುಕ್ ಮೂಲಕ ಬೆದರಿಕೆ ಒಡ್ಡಿದ ಕಂಗನಾ ಅಭಿಮಾನಿಯೊಬ್ಬನನ್ನು ಮುಂಬೈ ಪೊಲೀಸರು ಕೋಲ್ಕತ್ತಕ್ಕೆ ತೆರಳಿ ಬಂಧಿಸಿದ್ದಾರೆ! ಬಂಧಿತನನ್ನು ಟೋಲಿಗಂಜ್ ನಿವಾಸಿ ಪಾಲಾಶ್ ಬೋಸ್ ಎಂದು ಗುರುತಿಸಲಾಗಿದೆ.
ಪಾಲಾಶ್ ಅನ್ನು ಅಲಿಪೋರ್ ಕೋರ್ಟ್ಗೆ ಹಾಜರುಪಡಿಸಿ ಅಲ್ಲಿಂದ ಟ್ರಾನ್ಸಿಟ್ ರಿಮಾಂಡ್ ಪಡೆದು ಮುಂಬೈಗೆ ಕರೆದೊಯ್ಯಲಾಗುತ್ತಿದೆ ಎಂದು ಕೋಲ್ಕತ ಪೊಲೀಸರು ತಿಳಿಸಿದ್ದಾರೆ. ಚಿತ್ರನಟಿ ಕಂಗನಾ ರಾಣಾವತ್ ಮತ್ತು ಶಿವಸೇನಾ ನಡುವಿನ ಸಂಘರ್ಷ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಇತರೆ ಶಿವಸೇನಾ ನಾಯಕರು ಬೆದರಿಕೆಯನ್ನು ಎದುರಿಸತೊಡಗಿದ್ದಾರೆ.
ಇದನ್ನೂ ಓದಿ: ರಾಗಿಣಿ, ಸಂಜನಾ ಸೇರಿ ಆರೂ ಮಂದಿ ಆರೋಪಿಗಳು ಮತ್ತೆ ಸಿಸಿಬಿ ಕಸ್ಟಡಿಗೆ
ಕಂಗನಾ ಅಭಿಮಾನಿ ಪಾಲಾಶ್, ಫೇಸ್ಬುಕ್ ಪೋಸ್ಟ್ನಲ್ಲಿ ಸಂಜಯ್ ರಾವುತ್ ಗೆ “ಭೀಕರ ಪರಿಣಾಮ” ಎದುರಿಸಬೇಕಾದೀತು ಜೋಕೆ ಎಂದು ಎಚ್ಚರಿಕೆ ನೀಡಿದ್ದರು. ಮೂವಿ ಮಾಫಿಯಾಕ್ಕಿಂತ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರದಂತೆ ಆಗಿರುವ ಕಾರಣ ಮುಂಬೈ ಪೊಲೀಸರ ಬಗ್ಗೆ ಹೆಚ್ಚು ಭಯಪಡುತ್ತಿರುವುದಾಗಿ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿತ್ತು. ಈ ನಡುವೆ, ದ್ವೇಷದ ರಾಜಕೀಯಕ್ಕೆ ಇಳಿದ ಶಿವಸೇನೆ, ಬಿಎಂಸಿ ಮೂಲಕ ಬಾಂದ್ರಾದಲ್ಲಿನ ಕಂಗನಾ ಬಂಗ್ಲೆಯನ್ನು ಜೆಸಿಬಿ ಮೂಲಕ ಹೊಡೆದುರುಳಿಸಿದೆ. ಬಿಎಂಸಿಯ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್ ಸ್ಟೇ ಕೂಡ ಕೊಟ್ಟಿದೆ. (ಏಜೆನ್ಸೀಸ್)
14 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕ ಪಟ್ಟಿಯಲ್ಲಿದೆಯೇ?