More

    ನಾನು ಹೇಳಿದ್ದು ಪ್ರೂವ್​ ಮಾಡ್ಲಿಲ್ಲಾ ಅಂದ್ರೆ ಪದ್ಮಶ್ರೀ ವಾಪಸ್ಸು ಕೊಡ್ತೀನಿ …

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ ಪರವಾಗಿ ಗಟ್ಟಿಯಾಗಿ ನಿಂತವರು ಕಂಗನಾ ರಣಾವತ್​. ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಹೇಗೆ ಕೆಲಸ ಮಾಡುತ್ತಿದೆ ಮತ್ತು ಸುಶಾಂತ್​ ಅದಕ್ಕೆ ಹೇಗೆ ಬಲಿಯಾದರು ಎಂಬುದನ್ನು ಅವರು ಪದೇಪದೇ ಹೇಳುತ್ತಲೇ ಬಂದಿದ್ದಾರೆ.

    ಈ ವಿಷಯವಾಗಿ ಕಂಗನಾ ಮಾತನಾಡಿದ ನಂತರ ಶೇಖರ್​ ಕಪೂರ್​, ಅಭಯ್​ ಡಿಯೋಲ್​, ಅಭಿನವ್​ ಕಶ್ಯಪ್​ ಸೇರಿದಂತೆ ಕೆಲವರು ಮಾತನಾಡಿದರು. ಈಗ ಬಹಳಷ್ಟು ಜನ ಸುಮ್ಮನಾಗಿದ್ದಾರೆ. ಆದರೆ, ಕಂಗನಾ ಮಾತ್ರ ತಮ್ಮ ನಿಲುವನ್ನು ಬದಲಾಯಿಸಿಕೊಂಡಿಲ್ಲ. ಈಗಲೂ ಸುಶಾಂತ್​ ಪರವಾಗಿ ನಿಂತಿರುವ ಕಂಗನಾ, ನೆಪೋಟಿಸಂನಿಂದ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತರು ಕಷ್ಟಪಡುತ್ತಿದ್ದಾರೆ ಎಂದೇ ಹೇಳುತ್ತಿದ್ದಾರೆ.

    ಇದನ್ನೂ ಓದಿ: ಕಮಲ್​ ಹಾಸನ್​ ಚಿತ್ರಕ್ಕಾಗಿ ಖ್ಯಾತ ನಟಿಯರು ಮಾಡ್ತಾರಾ ಈ ತ್ಯಾಗ?

    ಒಂದೊಮ್ಮೆ ತಮ್ಮ ಮಾತುಗಳನ್ನು ಪ್ರೂವ್​ ಮಾಡುವುದಕ್ಕೆ ಸಾಧ್ಯವಾಗದಿದ್ದರೆ, ಆಗ ಸರ್ಕಾರ ಕೊಟ್ಟಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡುವುದಾಗಿ ಅವರು ಇದೀಗ ಹೊಸ ಬಾಂಬ್​ ಸಿಡಿಸಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮನಾಲಿ ನಿವಾಸದಿಂದಲೇ ಮಾತನಾಡಿರುವ ಅವರು, ‘ಸುಶಾಂತ್​ ಕೇಸ್​ನಲ್ಲಿ ನನ್ನನ್ನೂ ವಿಚಾರಣೆಗೆ ಒಳಪಡಿಸಿ ಎಂದು ನಾನು ಈಗಾಗಲೇ ಕೇಳಿಕೊಂಡಿದ್ದೇನೆ. ಆದರೆ, ಮುಂಬೈ ಪೊಲೀಸರು ಈ ಕುರಿತು ಯಾವುದೇ ವಿಚಾರಣೆಯನ್ನು ಇದುವರೆಗೂ ಮಾಡಿಲ್ಲ. ನನ್ನ ಮಾತುಗಳು ಸುಳ್ಳಾದರೆ ಅಥವಾ ನಾನು ಹೇಳಿದ್ದನ್ನು ನನ್ನ ಕೈಲಿ ಪ್ರೂವ್​ ಮಾಡುವುದಕ್ಕೆ ಆಗಿದ್ದರೆ, ಆಗ ನಾನು ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ ಕಂಗನಾ.

    ಇದನ್ನೂ ಓದಿ: ಕರಣ್​, ಆದಿತ್ಯ ಚೋಪ್ರಾ ವಿಚಾರಣೆ ಮಾಡಿಲ್ಲ ಏಕೆ: ಮುಂಬೈ ಕಾಪ್​ಗೆ ಕಂಗನಾ ಪ್ರಶ್ನೆ

    ‘ನಾನು ಇದುವರೆಗೂ ಏನೇ ಮಾತಾಡಿದ್ದರೂ, ಸುಮ್ಮನೆ ಮಾತಾಡಿಲ್ಲ. ಎಲ್ಲದಕ್ಕೂ ಸಾಕ್ಷಿ ಇಟ್ಟುಕೊಂಡೇ ಮಾತನಾಡಿದ್ದೇನೆ. ಒಂದು ಪಕ್ಷ ಅದು ಸುಳ್ಳಾದರೆ ಪ್ರಶಸ್ತಿ ವಾಪಸ್ಸು ಮಾಡುತ್ತೀನಿ’ ಎಂದು ಹೇಳಿದ್ದಾರೆ.

    ಈಗಾಗಲೇ ಸಾಕಷ್ಟು ತಿರುವುಗಳನ್ನು ಪಡೆದಿರುವ ಈ ಪ್ರಕರಣವು ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯ ತಿರುವು ಪಡೆಯುತ್ತದೋ ಎಂಬುದು ಯಾರ ಊಹೆಗೂ ನಿಲುಕುತ್ತಿಲ್ಲ.

    ತಮಿಳಿನ ಕಾಂಟ್ರವರ್ಸಿ ಹೀರೋ ಜತೆ ತ್ರಿಷಾ ಕೃಷ್ಣನ್​ ಮದುವೆ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts