ನಟ ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್ನ ಘಟಾನುಘಟಿಗಳ ಹೆಸರು ತಳುಕು ಹಾಕಿಕೊಂಡಿದೆ. ಸಲ್ಮಾನ್ ಖಾನ್, ಕರಣ್ ಜೋಹರ್, ಮಹೇಶ್ ಭಟ್ ಸೇರಿ ಸಾಕಷ್ಟು ಖ್ಯಾತನಾಮರ ಹೆಸರು ಸೇರಿಕೊಂಡಿರುವುದು ಈ ಒಂದು ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಇದೀಗ ಇದೇ ವಿಚಾರಣೆ ಬಗ್ಗೆ ನಟಿ ಕಂಗನಾ ಕೆಂಡಾಮಂಡಲರಾಗಿದ್ದಾರೆ.
ಇದನ್ನೂ ಓದಿ: ಜೋಗಿ ಪ್ರೇಮ್ ಅವರ ತಾಯಿ ಭಾಗ್ಯಮ್ಮ ವಿಧಿವಶ
ಈಗಾಗಲೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನ ಕರೆಸಿ ವಿಚಾರಣೆ ನಡೆಸಿದ್ದಾರೆ. ಇನ್ನು, ಈ ಕೇಸ್ನಲ್ಲಿ ಸಲ್ಮಾನ್ ಖಾನ್ ಅವರ ಹೆಸರು ತಳುಕು ಹಾಕಿಕೊಂಡಿದ್ದರಿಂದ, ಅವರ ವಿಚಾರಣೆಯನ್ನೂ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸಲ್ಮಾನ್ ವಿಚಾರಣೆ ಮಾಡಲಿಲ್ಲ. ಅದಾದ ಬಳಿಕ ಕರಣ್ಗೂ ವಿಚಾರಣೆಯಿಂದ ವಿನಾಯಿತಿ ಸಿಕ್ಕಿತ್ತು.
ಇದೀಗ ಇದೆಲ್ಲವನ್ನು ಗಮನಿಸಿರುವ ಕಂಗನಾ, ಕರಣ್ ಜೋಹರ್, ಮಹೇಶ್ ಭಟ್ ಮತ್ತು ಆದಿತ್ಯ ಚೋಪ್ರಾ ಅವರ ವಿಚಾರಣೆ ಯಾಕೆ ಮಾಡಿಲ್ಲ ಎಂದು ಮುಂಬೈ ಪೊಲೀಸ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನ
ಬಾಲಿವುಡ್ನಲ್ಲಿನ ನೆಪೋಟಿಸಂ ಬಗ್ಗೆ ಧ್ವನಿ ಎತ್ತಿದ್ದ ಕಂಗನಾ, ಸುಶಾಂತ್ ಸಾವಿಗೆ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದರು. ಈ ಸಾವಿನ ಹಿಂದೆ ದೊಡ್ಡವರ ಕೈವಾಡ ಎಂದು ಆರೋಪಿಸಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಹೀಗಿರುವಾಗಲೇ ಖ್ಯಾತ ನಾಮ ವ್ಯಕ್ತಿಗಳನ್ನು ವಿಚಾರಣೆಯಿಂದ ಕೈ ಬಿಟ್ಟಿದ್ದೇ ತಡ ಕಂಗನಾ ಪೊಲೀಸ್ ಇಲಾಖೆಯ ನಡೆಯನ್ನು ಪ್ರಶ್ನಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆಯಲ್ಲಿ ಕರಣ್ ಅವರ ನೇರ ಪಾತ್ರ ಇಲ್ಲದಿದ್ದರೂ, ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗಿದೆ. ಇನ್ನು ಸುಶಾಂತ್ ಅವರ ಬಿಹಾರದ ಅಭಿಮಾನಿಗಳು, ಕರಣ್ ಅವರ ಪ್ರತಿಕೃತಿ ದಹಿಸಿ, ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. (ಏಜೆನ್ಸೀಸ್)