More

    ಬೈಕ್ ಸ್ಕಿಡ್ ಆಗಿ ಕಲ್ಲಾಪೂರದ ದೈಹಿಕ ಶಿಕ್ಷಕ ಸಾವು

    ನರಗುಂದ: ಬೈಕ್ ಸ್ಕೀಡ್ ಆಗಿ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಲಾಪೂರ ಗ್ರಾಮದ ಮುಳಗುಂದವರ ಜಮೀನಿನ ಹತ್ತಿರ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
    ಕಲ್ಲಾಪೂರದ ನಿಂಗಬಸಪ್ಪ ಸಂಕಪ್ಪ ಆಡಿನ (50) ಮೃತ ಶಿಕ್ಷಕ ಎಂದು ತಿಳಿದು ಬಂದಿದೆ. ಇವರು ಕೊಣ್ಣೂರಿನಿಂದ ಬೈಕ್​ನಲ್ಲಿ ಅತೀ ವೇಗವಾಗಿ ಕಲ್ಲಾಪೂರಕ್ಕೆ ಆಗಮಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

    ಈ ಕುರಿತು ಶಿಕ್ಷಕನ ಪತ್ನಿ ಸಾವಿತ್ರಿ ಆಡಿನ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಪಿಐ ಮಲ್ಲಯ್ಯ ಮಠಪತಿ ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts