ಲಖನೌ: ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ವಿಕಾಸ್ ದುಬೆಯನ್ನು ಇಂದು ಬೆಳಗ್ಗೆ ಪೊಲೀಸರು ಎನ್ಕೌಂಟರ್ನಲ್ಲಿ ಕೊಲೆ ಮಾಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯನಿಯಿಂದ ಉತ್ತರ ಪ್ರದೇಶಕ್ಕೆ ಕರೆತರುವಾಗ ವಿಕಾಸ್ ದುಬೆ ಪೊಲೀಸ್ರ ಬಳಿ ಇದ್ದ ಗನ್ ಕಿತ್ತುಕೊಂಡು, ಪರಾರಿಯಾಗಲು ಪ್ರಯತ್ನಿಸಿದ. ಹಾಗಾಗಿ ಎನ್ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಾಸ್ ದುಬೆ ಎನ್ಕೌಂಟರ್ಗೆ ಪ್ರತಿಪಕ್ಷದ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ, ಸಂಸದೆ ಮಾಹುವಾ ಮಯುತ್ರಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ. ವಿಕಾಸ್ ದುಬೆ ಎನ್ಕೌಂಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮೌನ ಮುರಿದ ಸುದೀಪ್!
ವಿಕಾಸ್ ದುಬೆಯನ್ನು ಕೊಲ್ಲುವ ಬದಲು, ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಿತ್ತು ಎಂದು ಟ್ವೀಟ್ ಮಾಡಿರುವ ಮಯುತ್ರಾ, ಯೋಗಿ ಜೀ ಅವರ ಎನ್ಕೌಂಟರ್ ರಾಜ್ಯದಲ್ಲಿ ನ್ಯಾಯವನ್ನೇ ಹತ್ಯೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕರೊನಾಕ್ಕೆ ಬಲಿಯಾದ ಶಾಸಕ ಜಮೀರ್ ಆಪ್ತ- ರಾಮ್ದಾಸ್ ಆಪ್ತರಿಗೆ ಜ್ವರ
ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರ ಕೆಲಸ. ನ್ಯಾಯ-ಅನ್ಯಾಯ ವಿಚಾರಣೆ ಮಾಡಿ, ಸೂಕ್ತ ತೀರ್ಪು ನೀಡಲು ನ್ಯಾಯಾಲಯ ಇದೆ. ಆದರೆ ಯುಪಿಯ ಬಿಜೆಪಿ ಸರ್ಕಾರದಡಿಯಲ್ಲಿ ಈ ನಿಯಮಗಳಿಗೆ ಅರ್ಥವೇ ಇಲ್ಲದಂತಾಗಿದೆ. ಇಡೀ ದೇಶಕ್ಕೆ ಶಾಕ್ ಆಗಿದೆ. ಜನರೂ ಕೂಡ ಗೊಂದಲಕ್ಕೀಡಾಗುವಂತಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಚಿನ್ನ, ಬೆಳ್ಳಿ ಆಯ್ತು..ಇದೀಗ ವಜ್ರದ ಮಾಸ್ಕ್ಗಳ ಸರದಿ; ಸಾಮಾನ್ಯರ ಕೈಗೆಟಕುವಂಥದ್ದಲ್ಲ ಇದು…