More

    ತಾರಕ್​ ರಾಮ್​ಗೆ ತಾತನ, ಅಭಿಮಾನಿಗಳ ಆಶೀರ್ವಾದವಿದೆ ಎಂದ ಜ್ಯೂನಿಯರ್​ ಎನ್​.ಟಿ.ಆರ್​

    ಆನೇಕಲ್​: ‘ತಾರಕ್​ ರಾಮ್​ ಗುಣಮುಖರಾಗುವುದಕ್ಕೆ ನಾರಾಯಣ ಹೃದಯಾಲಯ ವೈದ್ಯರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರ‌ ಜತೆಗೆ ಅವರಿಗೆ ತಾತನ ಮತ್ತು ಅಭಿಮಾನಿಗಳ ಆಶಿರ್ವಾದ ಇದೆ. ತಾರಕ್​ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಿಗೆ ಬೇಡಿಕೊಳ್ಳುತ್ತೇನೆ’ ಎಂದು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಹೇಳಿದ್ದಾರೆ.

    ಇದನ್ನೂ ಓದಿ: ತಾರಕ ರತ್ನ ಆರೋಗ್ಯದಲ್ಲಿ ಕೊಂಚ ಚೇತರಿಕೆ; ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಟ್ಟ ಶಿವಣ್ಣ

    ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​.ಟಿ. ರಾಮರಾವ್ ಅವರ ಮೊಮ್ಮಗ ತಾರಕ್​ ರತ್ನ ಅವರ ಆರೋಗ್ಯ ವಿಚಾರಿಸಲು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ಡಾ.ಕೆ. ಸುಧಾಕರ್​ ಆಸ್ಪತ್ರೆಗೆ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಡಾ. ಸುಧಾಕರ್​ ಅವರಿಗೆ ಧನ್ಯವಾದ ಹೇಳಿದ ಜ್ಯೂನಿಯರ್​ ಎನ್​.ಟಿ.ಆ್​, ‘ಡಾ. ಸುಧಾಕರರವರಿಗೂ ಧನ್ಯವಾದ ಹೇಳುತ್ತೇನೆ. ಅವರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿದ್ದಾರೆ’ ಎಂದರು.
    ನಂತರ ಮಾತನಾಡಿದ ಸಚಿವ ಕೆ. ಸುಧಾಕರ್​, ‘ಜನವರಿ 27ರಂದು ತಾರಕ್​ ರಾಮ್​ ಅವರಿಗೆ ಲಘು ಹೃದಯಘಾತ ಆಗಿತ್ತು. ಅವರಿಗೆ ನಾರಾಯಣ ಹೃದಯಾಲಯದ ಖ್ಯಾತ ವೈದ್ಯರು ಹೆಚ್ಚಿನ ಚಿಕಿತ್ಸೆ ಕೊಡುತ್ತಿದ್ದಾರೆ. ನಿಮ್ಹಾನ್ಸ್​ನಿಂದ ಮೆದಳು ತಜ್ಞರು ಕೂಡ ಬಂದು ವಿಚಾರಸಿದ್ದಾರೆ. ಆದರೆ, ಅವರು ಅಪಾಯದಿಂದ ಪಾರಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಶೀಘ್ರ ಅವರು ಗುಣಮುಖರಾಗಿ ಬರಲಿ ಅಂತ ಆಶಿಸೋಣ’ ಎಂದು ಹೇಳಿದರು.

    ಇದನ್ನೂ ಓದಿ: ಓಟಿಟಿಯಲ್ಲಿ ಬಿಜಿಯಾದ ನಟಿ ಯಾಮಿ; ಮೂರು ವರ್ಷಗಳಲ್ಲಿ ಐದು ಚಿತ್ರಗಳು ಬಿಡುಗಡೆ

    ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ತಾರಕ್​ ರತ್ನ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.

    ತಾರಕ್​ ರಾಮ್​ಗೆ ಚಿಕಿತ್ಸೆ: ನಾರಾಯಣ ಹೃದಯಾಲಯಕ್ಕೆ ಜ್ಯೂ.ಎನ್​.ಟಿ.ಆರ್​, ಸಚಿವ ಡಾ. ಸುಧಾಕರ್ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts