ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ರಂಗ ಸೇರಿ ಕಿರುತರೆ ಕ್ಷೇತ್ರ ಸ್ಥಬ್ಧವಾಗಿವೆ. ಚಿತ್ರೀಕರಣ ನಿಂತಿದೆ. ಕಲಾವಿದರೆಲ್ಲ ಕ್ವಾರಂಟೈನ್ಲ್ಲಿದ್ದಾರೆ. ಇದೆಲ್ಲ ಒಂದು ಕಡೆಯಾದರೆ, ಲಾಕ್ಡೌನ್ ಘೋಷಣೆಯಾಗಿದ್ದರಿಂದ ಮುಂಚಿತವಾಗಿ ಧಾರಾವಾಹಿಗಳ ಕಂತುಗಳ ಬ್ಯಾಂಕ್ನ್ನು ಸಿದ್ಧಪಡಿಸಿಕೊಳ್ಳುವಂತೆ ಸರ್ಕಾರ ಮೂರು ದಿನಗಳ ಹೆಚ್ಚುವರಿ ಗಡುವು ನೀಡಿತ್ತು. ಅದರಂತೆ ಇದೀಗ ಬಹುತೇಕ ಎಲ್ಲ ಧಾರಾವಾಹಿಗಳ ಕಂತುಗಳು ಮುಗಿಯುತ್ತ ಬಂದಿವೆ. ಆ ಪೈಕಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಇವತ್ತೇ ಕೊನೆಯ ಕಂತನ್ನು ಪ್ರಸಾರಮಾಡಲಿದ್ದು, ನಾಳೆಯಿಂದ ಮರುಪ್ರಸಾರ ಆರಂಭವಾಗಲಿದೆ. ಹಾಗಂತ ಈ ಹಿಂದಿನಂತೆ ಅರ್ಧ ಗಂಟೆ ಪ್ರಸಾರ ಆಗುವುದಿಲ್ಲ. ಬದಲಿಗೆ ಸತತ ನಾಲ್ಕು ಕಂತುಗಳಲ್ಲಿ ಧಾರಾವಾಹಿ ಬಿತ್ತರವಾಗಲಿದೆ. ಸುದೀರ್ಘ ಎರಡು ಗಂಟೆ ಪ್ರಸಾರವಾಗಲಿದೆ. ಸಂಜೆ 6ಗಂಟೆಯಿಂದ 8ಗಂಟೆವರೆಗೆ ಮರುಪ್ರಸಾರವಾಗಲಿದೆ. ಅನಿರುದ್ಧ, ಮೇಘಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ.