ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರು ತಮ್ಮ ಮಾನ ಹಾನಿ ಮಾಡುವುದರ ಜತೆಗೆ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ನಟ ಅನಿರುದ್ಧ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಸಿಷ್ಠ ಅಭಿನಯದ ‘ಲವ್ ಲಿ’ ಸಿನಿಮಾ ಸೆಟ್ಗೆ ಹರಿಪ್ರಿಯಾ ಎಂಟ್ರಿ …
ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಧಾರಾವಾಹಿ ತಂಡದೊಂದಿಗಿನ ವೈಮನಸ್ಯದಿಂದಾಗಿ ಅವರು ಹೊರಬಂದರು. ಈ ಪ್ರಕರಣವು ಕಿರುತೆರೆ ನಿರ್ಮಾಪಕರ ಸಂಘದ ಮಟ್ಟಿಲೇರಿ, ಅನಿರುದ್ಧ್ ಅವರಿಗೆ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ತೀರ್ಮಾನವಾಗಿತ್ತು. ಹೀಗಿರುವಾಗಲೇ, ಉದಯ ಟಿವಿಯಲ್ಲಿ ಪ್ರಸಾರವಾಗಬೇಕಿರುತವ ‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಕಿರುತೆರೆ ನಿರ್ಮಾಪಕರ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಅನಿರುದ್ಧ್ ಅವರಿಗೆ ನಟಿಸುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಈ ಪ್ರಕರಣ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿದ್ದು, ಇಂದು ಸಭೆ ನಡೆದಿದೆ. ಆದರೆ, ಈ ಸಭೆಗೆ ‘ಜೊತೆ ಜೊತೆಯಲಿ’ ಅಥವಾ ಕಿರುತೆರೆ ನಿರ್ಮಾಪಕರ ಸಂಘದವರಾಗಲೀ ಹಾಜರಾಗಿಲ್ಲ.
ಈ ಕುರಿತು ಮಾತನಾಡಿರುವ ಅನಿರುದ್ಧ್, ‘ಆರೂರು ಜಗದೀಶ್ ನನ್ನ ಮಾನಹಾನಿ ಮಾಡುವ ಕೆಲಸ ಮಾಡಿದ್ದಾರೆ. ನನ್ನ ಅನ್ನ ಕಿತ್ತುಕೊಳ್ಳೂವ ಕೆಲಸ ಮಾಡಿದ್ದಾರೆ. ಈ ಹಿಂದೆ ಕೆಟಿವಿ ಅಧ್ಯಕ್ಷರು ಕರೆದಾಗಲೂ ಅವರು ಬರಲಿಲ್ಲ. ಈಗ ವಾಣಿಜ್ಯ ಮಂಡಳಿಯ ಸಭೆಗೂ ಅವರು ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂತಾರ-2 ಮಾಡಲು ಅನುಮತಿ ಕೋರಿದ ಚಿತ್ರತಂಡ; ಶರತ್ತು ಹಾಕಿದ ದೈವ..!
ಇನ್ನು, ಅನಿರುದ್ ಅವರನ್ನು ಬ್ಯಾನ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಹೇಳಿದ್ದಾರೆ. ‘ಈ ಸಭೆಗೆ ನಿರ್ಮಾಪಕರ ಸಂಘವನ್ನು ಕರೆದಿದ್ದರೂ ಅವರು ಬಂದಿಲ್ಲ. ಆದ್ದರಿಂದ ಅದ್ದರಿಂದ ವಾಣಿಜ್ಯ ಮಂಡಳಿ ಖಡಕ್ ನಿರ್ಧಾರ ತೆಗೆದು ಕೊಂಡಿದೆ. ಇಡೀ ಉದ್ಯಮ ಅನಿರುದ್ದ್ ಅವರ ಜೊತೆ ಇದೆ. ಅನಿರುದ್ದ್ ಅಷ್ಟೇ ಅಲ್ಲ, ಯಾರನ್ನೂ ಬ್ಯಾನ್ ಮಾಡೊಕೆ ಆಗಲ್ಲ. ನಾವು ಅನಿರುದ್ಧ್ ಅವರ ಜತೆಗೆ ಇರುತ್ತೇವೆ’ ಎಂದಿದ್ದಾರೆ.
ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕಿತ್ತು ಹಾಕೋಕೆ ಯಾರ ಒತ್ತಡ ಇತ್ತು?: ಮೌನ ಮುರಿದ ಆರೂರು ಜಗದೀಶ್