ಜೋಧಪುರ: ಜೋಧಪುರ್ನ ಜಿಲ್ಲಾ ಸೆಷನ್ಸ್ಕೋರ್ಟ್, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೃಷ್ಣಮೃಗ ಬೇಟೆ ಪ್ರಕರಣದ ಹಿನ್ನೆಲೆಯಲ್ಲಿ ಡಿಸೆಂಬರ್ ಒಂದರಂದು ಕೋರ್ಟ್ಗೆ ಹಾಜರಾಗುವುದಕ್ಕೆ ತಿಳಿಸಿದೆ.
ಇದನ್ನೂ ಓದಿ: ‘ಮಣಿಕರ್ಣಿಕಾ’ ಚಿತ್ರದಿಂದ ಸೋನು ಹೊರಬಂದಿದ್ದೇಕೆ? ಇಲ್ಲಿದೆ ಕಾರಣ …
ಇದಕ್ಕೂ ಮುನ್ನ , ಇದರ ವಿಚಾರಣೆಯನ್ನು ಕೋರ್ಟ್ ಮುಂದೂಡಿತ್ತು. ಮುಂದಿನ ವಿಚಾರಣೆ ವೇಳೆಗೆ ಸಲ್ಮಾನ್ ಖುದ್ದು ಹಾಜರಿ ಇರಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಒಂದರಂದು ಸಲ್ಮಾನ್ ಖಾನ್ ಹಾಜರಾಗಬೇಕಿದೆ.
ಸುಮಾರು 22 ವರ್ಷಗಳ ಹಿಂದೆ, ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯುವ ಸಂದರ್ಭದಲ್ಲಿ, ಸಲ್ಮಾನ್ ಸೇರಿದಂತೆ ಕಲವು ನಟ-ನಟಿಯರು ಕೃಷ್ಣಮೃಗ ಬೇಟೆಯಾಡಿದ್ದರು.
ಇದನ್ನೂ ಓದಿ: ಅವ್ರು ನನ್ನ ಸಾಯಿಸ್ತಾರೆ ಅಂತ ಭಯವಾಗ್ತಿದೆ … ಸುಶಾಂತ್ ಹೀಗೆ ಮೆಸೇಜ್ ಕಳಿಸಿದ್ದು ಯಾಕೆ?
ಈ ಸಂಬಂಧ, ಜೋಧಪುರದ ನ್ಯಾಯಾಲಯವು ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು. ಅವರ ಜತೆಗೆ ಈ ಬೇಟೆಯಲ್ಲಿ ಹಾಜರಿದ್ದ ಸೈಫ್ ಅಲಿ ಖಾನ್, ನೀಲಂ, ತಾಬು, ಸೋನಾಲಿ ಬೇಂದ್ರೆ ಮುಂತಾದವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
‘ನೀನೊಬ್ಬ ವಂಚಕ’ ಎಂದು ಜರಿದವರಿಗೆ ಸೋನು ಸೂದ್ ಕೊಟ್ಟ ಉತ್ತರ ಹೀಗಿದೆ…