ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಇದಕ್ಕೆ ಪುಷ್ಠಿ ನೀಡುವ ಅಂಶಗಳು ಇದುವರೆಗೂ ಸಿಕ್ಕಿಲ್ಲ. ಸಿಬಿಐನವರು ಸಹ ಸುಶಾಂತ್ ಅವರದ್ದು ಕೊಲೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಾಂಜಾ ಬೇಡ, ಮಾಲ್ ಇದ್ರೆ ಬೇಕಾಗಿತ್ತು..’; ಬೆಚ್ಚಿ ಬೀಳಿಸುತ್ತೆ ದೀಪಿಕಾ ಪಡುಕೋಣೆ ವಾಟ್ಸಾಪ್ ಚಾಟ್!
ಹೀಗಿರುವಾಗಲೇ, ಸುಶಾಂತ್ ತಮ್ಮ ಸಹೋದರಿಗೆ ಕಳಿಸಿದ್ದಾರೆನ್ನಲಾದ ಎಸ್.ಎಂ.ಎಸ್ವೊಂದು ಇದೀಗ ಬಹಿರಂಗಗೊಂಡಿದೆ. ಮೂಲಗಳ ಪ್ರಕಾರ, ಸುಶಾಂತ್ ಅವರು ತಮ್ಮ ಸಹೋದರಿ ಮೀತು ಸಿಂಗ್ಗೆ ಜೂನ್ 9ರಂದು ಒಂದು ಎಸ್.ಎಂ.ಎಸ್ ಕಳಿಸಿದ್ದರಂತೆ.
ಅದರ ಹಿಂದಿನ ದಿನವಷ್ಟೇ, ಸುಶಾಂತ್ ಅವರ ಮ್ಯಾನೇಜರ್ ಆದ ದಿಶಾ ಸಾಲಿಯಾನ್ ಅವರ ಮರಣವಾಗಿತ್ತು. ಅದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಅದರ ಮರುದಿನವೇ ಸುಶಾಂತ್ ತಮ್ಮ ಸಹೋದರಿಗೆ, ‘ಇವರೆಲ್ಲಾ ನನ್ನ ಸಾಯಿಸಿಬಿಡ್ತಾರೆ ಅಂತ ನನಗೆ ಬಹಳ ಭಯವಾಗ್ತಿದೆ’ ಎಂದು ಸುಶಾಂತ್ ಮೆಸೇಜ್ ಹಾಕಿದ್ದರಂತೆ.
ಅಷ್ಟೇ ಅಲ್ಲ, ಈ ವಿಷಯವಾಗಿ ರಿಯಾ ಚಕ್ರವರ್ತಿಯನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರಂತೆ. ರಿಯಾ ಜತೆಗೆ ತುರ್ತಾಗಿ ಕೆಲವು ವಿಷಯಗಳನ್ನು ಮಾತನಾಡುಬೇಕಿತ್ತಾದರೂ, ಅವರು ಪ್ರತಿಕ್ರಿಯಿಸುತ್ತಿಲ್ಲ ಎಂದು ಸುಶಾಂತ್ ಮೆಸೇಜ್ ಮಾಡಿದ್ದರಂತೆ.
ಇದನ್ನೂ ಓದಿ: ನಟ ಸತೀಶ್ ನೀನಾಸಂ ನೈಟ್ ಡ್ಯೂಟಿ ಹೇಗಿರುತ್ತೆ?; ಇಲ್ಲಿದೆ ನೋಡಿ ವಿಡಿಯೋ…
ಈ ವಿಷಯ ಇದೀಗ ಬೆಳಕಿಗೆ ಬಂದಿದ್ದು, ಇದರಿಂದ ಪ್ರಕರಣ ಯಾವ ರೀತಿ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.