More

    ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಸೌರ್ಜನ್ಯದಿಂದ ಮಾತನಾಡಲಿ; ಬಿಜೆಪಿ ಹಿರಿಯ ಮುಖಂಡ ರವೀಂದ್ರ ಜಲ್ದಾರ್

    ರಾಯಚೂರು: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಶಾಸಕರನ್ನು ಟೀಕಿಸುವ ಭರದಲ್ಲಿ ಮಹಿಳೆಯರನ್ನು ಬಲಹೀನರು ಎನ್ನುವಂತೆ ಮಾತನಾಡಿರುವುದು ಸರಿಯಲ್ಲ. ವಾಸ್ತವಾಂಶ ಅರಿಯದೇ ನಗರ ಶಾಸಕ ಡಾ.ಶಿವರಾಜ ಪಾಟೀಲ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರವೀಂದ್ರ ಜಲ್ದಾರ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಗರದ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಸೀರೆ ಬಳೆಗಳನ್ನು ಉಡುಗೋರೆಯಾಗಿ ನೀಡುವುದಾಗಿ ಹೇಳಿಕೆ ನೀಡುವ ಮೂಲಕ ಎಂ.ವಿರೂಪಾಕ್ಷಿ ಸೌಜನ್ಯ ಮರೆತು ಮಾತನಾಡುತ್ತಿದ್ದಾರೆ ಎಂದರು. ಹದಗೆಟ್ಟ ರಸ್ತೆಗಳ ದುರಸ್ತಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ತಕ್ಷಣದಿಂದ ಕಾಮಗಾರಿ ಆರಂಭಿಸಲಾಗುವುದು.

    ಸದಸ್ಯರ ಬೇಡಿಕೆ, ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಅರಿತು ಶಾಸಕರು ಅನುದಾನವನ್ನು 35 ವಾರ್ಡ್‌ಗಳಿಗೆ ನೀಡಿದ್ದಾರೆ. ಅನುದಾನ ದುರ್ಬಳಕೆಯಾಗಿದೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸುವ ಮುನ್ನ ಎಲ್ಲಿ ದುರ್ಬಳಕೆಯಾಗಿದೆ, ಯಾವ ವಾರ್ಡ್‌ಗೆ ಅನುದಾನ ಬಿಡುಗಡೆ ಮಾಡಿಲ್ಲ ಎನ್ನುವುದನ್ನು ಎಂ.ವಿರುಪಾಕ್ಷಿ ಸಾಬೀತು ಪಡಿಸಲಿ ಎಂದು ರವೀಂದ್ರ ಜಲ್ದಾರ್ ಸಾವಲೆಸದರು. ನಗರಸಭೆ ಸದಸ್ಯರಾದ ಶರಣಪ್ಪ ಬಲ್ಲಟಗಿ, ಶಶಿರಾಜ, ನಾಗರಾಜ, ಮುಖಂಡ ಆಂಜಿನೇಯ ಕಡಗೋಲ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts