More

    ವೀರಭದ್ರೇಶ್ವರ ದೇವರ ಜಯಂತ್ಯುತ್ಸವ ಆಚರಣೆ

    ಹಿರೇಕೆರೂರ: ಪಟ್ಟಣದ ತೋಂಟದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೀರಭದ್ರೇಶ್ವರ ದೇವರ ಜಯಂತ್ಯುತ್ಸವ ಆಚರಿಸಲಾಯಿತು.

    ಬೆಳಗ್ಗೆ ಪ್ರಶಾಂತಯ್ಯ ಶಾಸ್ತ್ರಿ ಮಠದ ಅವರ ನೇತೃತ್ವದಲ್ಲಿ ದೇವರಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ನೆರವೇರಿದವು. ನಂತರ ದೇವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ ರಾಯನಗೌಡ್ರ, ಹಿರಣ್ಣಯ್ಯ ಮಠದ, ಮಲ್ಲಿಕಾರ್ಜುನ ಹಳಕಟ್ಟಿ, ಸಂತೋಷ ವಾಲಿ, ರಾಕೇಶ ಶೆಟ್ಟರ್, ಗಣೇಶ ಹಳಕಟ್ಟಿ, ಕುಮಾರ ವಾಲಿ, ಈರಣ್ಣ ಹಾದ್ರಿಹಳ್ಳಿ, ಜಗದೀಶ ಹಾದ್ರಿಹಳ್ಳಿ, ಕೊಟ್ರೇಶ ಹಳಕಟ್ಟಿ ಹಾಗೂ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts