More

    ನಿಮ್ಮನ್ನೆಲ್ಲ ಕೆಲಸದಿಂದ ಕಿತ್ತು ಹಾಕಬೇಕು; ಜಯಾ ಬಚ್ಚನ್​ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

    ಮುಂಬೈ: ಬಾಲಿವುಡ್​ನ ಹಿರಿಯ ನಟಿ ಮತ್ತು ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಅವರ ಪತ್ನಿ ಜಯಾ ಬಚ್ಚನ್​ ಅವರ ಮೂಗಿನ ತುದಿಯಲ್ಲೇ ಕೋಪ ಇರುತ್ತದೆ. ಯಾರಾದರೂ ತರಲೆ ಮಾಡಿದರೆ, ಅಸಭ್ಯವಾಗಿ ವರ್ತಿಸಿದರೆ ಅವರು ಸಿಟ್ಟು ಸ್ಪೋಟಗೊಳ್ಳುತ್ತದೆ. ಅದರಲ್ಲೂ ಪಾಪರಾಜಿಗಳನ್ನು ಕಂಡರೆ ಜಯಾ ಬಚ್ಚನ್​ ಅವರಿಗೆ ಎಲ್ಲಿಲ್ಲದ ಸಿಟ್ಟು.

    ಇದನ್ನೂ ಓದಿ: ಮದುವೆಯಾದವರ ಅನುಭವವೇ ‘ಲವ್ ಬರ್ಡ್ಸ್’; ಟೀಸರ್ ಬಿಡುಗಡೆ

    ತಮ್ಮ ಅನುಮತಿ ಇಲ್ಲದೆ ಪಾಪರಾಜಿಗಳು ಫೋಟೋ ತೆಗೆದರೆ ಅಥವಾ ವೀಡಿಯೋಗಳನ್ನು ಮಾಡಿದರೆ, ಅವರಿಗೆ ಅಲ್ಲೇ ಕ್ಲಾಸ್​ ತೆಗೆದುಕೊಂಡ ಉದಾಹರಣೆಗಳು ಹಲವಿವೆ. ಈಗ ಆ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ.

    ಇತ್ತೀಚೆಗೆ, ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ಯಾವುದೋ ಕಾರ್ಯಕ್ರಮಕ್ಕೆ ಇಂದೋರ್​ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಯಾ ಬಚ್ಚನ್​ ಅವರನ್ನು ಏರ್​ಪೋರ್ಟ್​ನಲ್ಲಿ ಯಾರೋ ಮಾತಾಡಿಸಿದ್ದಾರೆ. ಪಾಪರಾಜಿಗಳು ಅದೆಲ್ಲಿದ್ದರೋ ಗೊತ್ತಿಲ್ಲ. ಬಂದು ಜಯಾ ಬಚ್ಚನ್​ ಅವರ ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದ್ದಾರೆ. ಸಿಟ್ಟಿಗೆದ್ದ ಜಯಾ ಬಚ್ಚನ್​, ಫೋಟೊ ತೆಗೆಯುವುದನ್ನು ನಿಲ್ಲಿಸುವುದಕ್ಕೆ ಹೇಳಿದ್ದಾರೆ.

    ಇದನ್ನೂ ಓದಿ: ‘ಸಿಂಗಂ’ ಜತೆಗೆ ‘ಸಿಂಬ’; ಅಜಯ್​ ದೇವಗನ್​ ಚಿತ್ರದಲ್ಲಿ ರಣವೀರ್​ ಸಿಂಗ್​

    ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಯಾ ಬಚ್ಚನ್​, ‘ನನ್ನ ಫೋಟೋಗಳನ್ನು ತೆಗೆಯಬೇಡಿ. ನಿಮಗೆ ಹೇಳಿದರೆ ಅರ್ಥವಾಗುವುದಿಲ್ಲವಾ? ನಿಮ್ಮಂಥವರನ್ನು ಕೆಲಸದಿಂದು ಕಿತ್ತು ಹಾಕಬೇಕು’ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅವರ ಬಾಡಿಗಾರ್ಡ್​ಗಳು ಬಂದು ಪಾಪರಾಜಿಗಳನ್ನು ತಡೆದಿದ್ದಾರೆ. ಜಯಾ ಅವರ ಸ್ವಲ್ಪ ಹಿಂದೆ ಹಿಂದೆ ಅಮಿತಾಭ್​ ಬಚ್ಚನ್​, ತಮ್ಮ ಪತ್ನಿಯ ಸಿಟ್ಟು ನೋಡಿ ಗಾಬರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಓಟಿಟಿಗೆ ಬರೋದು ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts