ಐನಾಪುರ: ಕರೊನಾ ಸೋಂಕು ನಿವಾರಣೆಯಾಗಲಿ. ಸಾರ್ವಜನಿಕರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಶನೇಶ್ವರನಿಗೆ ಮಹಾಮೃತ್ಯುಂಜಯ ಹೋಮ ನೆರವೇರಿಸಲಾಗಿದೆ ಎಂದು ಪ್ರವೀಣಶಾಸ್ತ್ರಿ ಹಿರೇಮಠ ಹೇಳಿದ್ದಾರೆ.
ಅಥಣಿ ತಾಲೂಕಿನ ಮದಬಾವಿ ಗ್ರಾಮದ ಶನೇಶ್ವರ ದೇವಸ್ಥಾನದಲ್ಲಿ ಸೋಮವಾರ ಶನೇಶ್ವರನಿಗೆ ಹೋಮ-ಹವನ ನೆರವೇರಿಸಿ ಮಾತನಾಡಿ, ಮಹಾಮಾರಿ ಕರೊನಾ ವೈರಸ್ನಿಂದ ಇಂದು ವಿಶ್ವವೇ ಆತಂಕಕ್ಕೆ ಒಳಗಾಗಿದೆ. ಜನರು ಸರ್ಕಾರದ ನಿಯಮ ತಪ್ಪದೇ ಪಾಲಿಸಬೇಕು ಎಂದರು.