ಹೈದರಾಬಾದ್: ಉದ್ರಿಕ್ತ ಜನರ ಗುಂಪೊಂದು ಹಚ್ಚಿದ ಬೆಂಕಿಗೆ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಸುಟ್ಟ ಗಂಭೀರ ಗಾಯಗಳಿಂದ ಬಳಲುತ್ತಿರುವ ಘಟನೆ ಹೈದಾರಾಬಾದ್ನ ಬಾಲಾಜಿನಗರದಲ್ಲಿ ಗುರುವಾರ ನಡೆದಿದೆ.
ಇನ್ಸ್ಪೆಕ್ಟರ್ ಪಿ. ಬಿಕ್ಷಪತಿ ರಾವ್ ಮತ್ತು ಕಾನ್ಸ್ಟೇಬಲ್ ಬಿ. ಅರುಣ್ ಗಂಭೀರ ಗಾಯಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕಟ್ಟಡ ಧ್ವಂಸ ಕಾರ್ಯಾಚರಣೆಯ ಕರ್ತವ್ಯಕ್ಕೆ ತೆರಳಿದ್ದಾಗ ಗುಂಪೊಂದು ಅವರತ್ತ ಉರಿಯುವ ದ್ರವವನ್ನು ಎಸೆದು ಬೆಂಕಿ ಹಚ್ಚಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ ಜವಹರ್ನಗರ ಇನ್ಸ್ಪೆಕ್ಟರ್ ಬಿಕ್ಷಪತಿ ರಾವ್ಗೆ ಗುರುವಾರ ಮುನ್ಸಿಪಲ್ ಕಮಿಷನರ್ ಎನ್. ಮಂಗಮ್ಮ ಅವರಿಂದ ಕರೆಯೊಂದು ಬರುತ್ತದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಕಮಿಷನರ್, ಇನ್ಸ್ಪೆಕ್ಟರ್ ನೆರವು ಕೇಳುತ್ತಾರೆ.
ಪೊಲೀಸ್ ಪಡೆಯೊಂದಿಗೆ ಮುನ್ಸಿಪಲ್ ಮತ್ತು ಕಂದಾಯ ಅಧಿಕಾರಿಗಳು ಕಾರ್ಯಾಚರಣೆಯ ಸ್ಥಳವನ್ನು ತಲುಪಿದಾಗ ಗುಂಪಿನ ಸದಸ್ಯರಾದ ಪೂನಮ್ ಚಾಂದ್, ನಿಹಾಲ್ ಚಾಂದ್, ಶಾಂತೆ ಜಿ ದೇವಿ, ನಿರ್ಮಲ್ ಬಲ್ಸಿಂಗ್, ಚಿನರ್ಮಪಟೇಲ್, ಗೀತಾ, ಗೋದಾವರಿ, ಯೋಗಿ ಕಮಲ್, ಮದನ್ ಲಾಲ್ ಸೇರಿದಂತೆ ಕೆಲ ಸ್ಥಳೀಯ ರಾಜಕಾರಣಿಗಳಾದ ರಂಗುಲಾ ಶಂಕರ್, ಶೋಭಾ ರೆಡ್ಡಿ ಮತ್ತವರ ಬೆಂಬಲಿಗರು ಸೇರಿ ಸರ್ಕಾರಿ ಅಧಿಕಾರಿಗಳನ್ನು ತಡೆದು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಲು ಯತ್ನಿಸುತ್ತಾರೆ. ಅಲ್ಲದೆ, ಅಧಿಕಾರಿಗಳನ್ನು ಅಸಭ್ಯ ಪದಗಳಿಂದ ನಿಂದಿಸಿ, ಅವರ ಮೇಲೆ ಖಾರದಪುಡಿಯನ್ನೂ ಎರಚಿ ಮೃಗಗಳಂತೆ ವರ್ತಿಸಿದ್ದಾರೆ.
ಇದನ್ನೂ ಓದಿ: ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!
ಅಷ್ಟರಲ್ಲಾಗಲೇ ನಿವಾಹಲ್ ಚಾಂದ್, ಶಾಂತಿ ದೇವಿ ಮತ್ತು ನಿರ್ಮಲಾ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡದೊಳಗೆ ಸೇರಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಕಟ್ಟದಿಂದ ಭಾರಿ ಪ್ರಮಾಣದಲ್ಲಿ ಹೊಗೆ ಮತ್ತು ಬೆಂಕಿ ಹೊರಬರಲು ಶುರುವಾಯಿತು. ಅಷ್ಟರಲ್ಲಾಗಲೇ ಒಳಗಿರುವವರು ಬೆಂಕಿ ಹಂಚಿಕೊಂಡಿದ್ದಾರೆಂಬ ವದಂತಿ ಹರಿದಾಡುತ್ತಿದ್ದಂತೆ ಇನ್ಸ್ಪೆಕ್ಟರ್ ಬಿಕ್ಷುಪತಿ ಮತ್ತು ಕಾನ್ಸ್ಟೇಬಲ್ ಅರುಣ್ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಆದರೆ, ಒಳಗಿದ್ದ ನಿಹಾಲ್ ಚಾಂದ್, ಶಾಂತಿ ದೇವಿ ಮತ್ತು ನಿರ್ಮಲ ಪೊಲೀಸರ ಮೇಲೆಯೇ ಉರಿಯುವ ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಪೊಲೀಸರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಶೇಷ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. (ಏಜೆನ್ಸೀಸ್)
ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!
ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು ಶಾಕ್!