ನವದೆಹಲಿ: ತಂಟೆಕೋರ ಚೀನಾ ಇಡೀ ಜಗತ್ತಿಗೆ ಕರೊನಾ ವ್ಯಾಪಿಸಿ ತಾನು ಮಾತ್ರ ಆ ಸಂಕಷ್ಟದಿಂದ ಹೊರಬಂದಿದ್ದೇನೆ ಎಂದು ತೋರಿಸಿಕೊಳ್ಳುತ್ತಿದ್ದು, ಸದ್ಯ ಬೇರೆಯದ್ದೇ ಚಟುವಟಿಕೆಯಲ್ಲಿ ಭಾರಿ ಬ್ಯುಸಿಯಾಗಿದೆ.
ಭಾರತದೊಂದಿಗೆ ಗಡಿ ತಂಟೆ ತೆಗೆದು ಅತ್ಯಂತ ಹಿಂಸಾತ್ಮಕ ಸಂಘರ್ಷ ನಡೆಸಿದ್ದಲ್ಲದೇ, ಭಾರತದ 20 ಯೋಧರ ಹತ್ಯೆಯನ್ನು ನಡೆಸಿದೆ. ಇಷ್ಟಕ್ಕೆ ಸುಮ್ಮನಾಗದೇ, ನಿರಂತರ ವ್ಯಾಜ್ಯದಲ್ಲಿ ತೊಡಗಿದೆ.
ಇದನ್ನೂ ಓದಿ; ಪ್ರಧಾನಿಯನ್ನೇ ಟೀಕಿಸಿ, ಚೀನಿಯರ ಸುಳ್ಳು ಮೆಚ್ಚಿದ ಕಾಂಗ್ರೆಸ್ ಸಂಸದ ಶಶಿ ತರೂರ್?
ಭಾರತದೊಂದಿಗೆ ಮಾತ್ರವಲ್ಲದೇ, ಜಪಾನ್ ಹಾಗೂ ತೈವಾನ್ ಗಡಿಯಲ್ಲೂ ಚೀನಾ ತಂಟೆ ನಡೆಸಿದೆ. ಇಲ್ಲಿಯೂ ಗಡಿಯನ್ನು ಬಂದ್ ಮಾಡಲು ಮುಂದಾಗಿದೆ. ಹೀಗಾಗಿ ಚೀನಾಗೆ ಪಾಠ ಕಲಿಸಲೆಂದೇ ಜಪಾನ್ ಕೂಡ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜನೆಗೊಳಿಸಿದೆ. ಜತೆಗೆ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಚೀನಾದ ಯುದ್ಧೋನ್ಮಾದವನ್ನುನಿಗ್ರಹಿಸಲೆಂದೇ ಜಪಾನ್ ತನ್ನ ವಾಯುಸೇನೆ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಪ್ಯಾಟ್ರಿಯಾಟ್ ಪಿಎಸಿ-3 ವಾಯುದಾಳಿ ಕ್ಷಿಪಣಿಯನ್ನು ಜಪಾನ್ನ ನಾಲ್ಕು ವಾಯುನೆಲೆಗಳಲ್ಲಿ ನಿಯೋಜಿಸಿದೆ. 70 ಕಿ.ಮೀ. ದಾಳಿ ಗುರಿ ಹೊಂದಿದ್ದ ಕ್ಷಿಪಣಿ ಸಾಮರ್ಥ್ಯವನ್ನು ಈಗ 100 ಕಿ.ಮೀ.ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ; ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್ ನದಿ ಸೇತುವೆ ಕಾಮಗಾರಿ ಪೂರ್ಣ
ಇದಲ್ಲದೇ, ಕ್ಷಿಪಣಿ ಹಾಗೂ ಇತರ ಸಂಭಾವ್ಯ ದಾಳಿಯನ್ನು ಪತ್ತೆ ಹಚ್ಚಿ ಅದನ್ನು ನಿಗ್ರಹಿಸುವ ಕ್ಷಿಪಣಿ ನಿರೋಧ ವ್ಯವಸ್ಥೆಯನ್ನು ಜಪಾನ್ ಗಡಿಯಲ್ಲಿ ನಿಯೋಜಿಸಿದೆ. ಒಟ್ಟಿನಲ್ಲಿ ತಂಟೆಕೋರ ಚೀನಾಗೆ ಬುದ್ಧಿ ಕಲಿಸಲು ಜಪಾನ್ ಸಜ್ಜಾಗಿದೆ.
ಕನಕಪುರದಲ್ಲಿ ಜುಲೈ 1ರವರೆಗೆ ಸ್ವಯಂಪ್ರೇರಿತ ಲಾಕ್ಡೌನ್; ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ನಿರ್ಣಯ