ಪ್ರತಿ ವರ್ಷ ರಾಜ್ಯೋತ್ಸವ ಆಚರಿಸುವ ಮೊದಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಶಾಸನ ಪಡೆಯುವ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಂಪ್ರದಾಯ. ಆದರೆ ಪ್ರಸಕ್ತ ವರ್ಷ ಕರೊನಾ ನೆಪವೊಡ್ಡಿ ಮಾಶಾಸನ ಮಂಜೂರಾತಿ ಹಾಗೂ ಅಶಕ್ತ ಕಲಾವಿದರಿಗೆ ಮಾಶಾಸನ ಹಂಚಿಕೆಯಲ್ಲಿ ವಿಳಂಬ ಮಾಡುತ್ತಿರುವುದು ದುರದೃಷ್ಟಕರ. ಮಾಶಾಸನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಗತಿಸಿದರೂ ಫಲಾನುಭವಿಗಳ ಆಯ್ಕೆಯಲ್ಲಿ ಇಲಾಖೆ ತೋರುತ್ತಿರುವ ನಿರುತ್ಸಾಹ ನೋವು ತರುವ ಸಂಗತಿ. 60 ವರ್ಷ ಮೇಲ್ಪಟ್ಟ ಬಹಳಷ್ಟು ಕಲಾವಿದರ ಬದುಕು ಕ್ಲಿಷ್ಟಕರವಾಗಿರುತ್ತದೆ. ಕಿತ್ತು ತಿನ್ನುವ ಬಡತನದ ಮಧ್ಯೆ ಜೀವನ ನಡೆಸುವ ಕಲಾವಿದರ ಕುಟುಂಬಗಳಿಗೆ ಸರ್ಕಾರ ಸೂಕ್ತ ನೆರವು ನೀಡಬೇಕು.
| ವಿ.ಜಿ.ಇನಾಮದಾರ, ಸಾರವಾಡ (ವಿಜಯಪುರ ಜಿಲ್ಲೆ)
ದಾಖಲೆ ಪತ್ರಗಳಿಲ್ಲದೆ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಇಟ್ಟುಕೊಂಡಿದ್ದ ಜುವೆಲ್ಲರಿ ಮಳಿಗೆ!