ಶ್ರೀನಗರ: ಜಮ್ಮ ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿಗೆ 13 ಮಂದಿ ಭಯೋತ್ಪಾದಕರು ಮೃತಪಟ್ಟಿದ್ದಾರೆ.
ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನಲ್ಲಿ ಮೂವರು ಹಾಗೂ ಜಮ್ಮು ವಿಭಾಗದ ಗಡಿ ನಿಯಂತ್ರಣ ರೇಖೆ ಬಳಿ 10 ಮಂದಿ ಭಯೋತ್ಪಾದಕರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ ಕೋಟೆನಾಡಲ್ಲಿ ಧಾರಾಕಾರ ಮಳೆ
ಮೇ 28ರಂದು ಉಗ್ರರು ನಿಯಂತ್ರಣ ರೇಖೆ ನುಸುಳುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಆಯಕಟ್ಟಿನ ಸ್ಥಳಗಳಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು.
ಸೋಮವಾರ ಬೆಳಗ್ಗೆ ಉಗ್ರರು ನೌಶೇರಾ ಸೆಕ್ಟರ್ ಹಾಗೂ ಜಮ್ಮು ವಿಭಾಗದ ಗಡಿ ನಿಯಂತ್ರಣ ರೇಖೆ ನುಸುಳಲು ಯತ್ನಿಸಿದಾಗ ಯೋಧರು ದಾಳಿ ನಡೆಸಿದರು.
ಪೂಂಚ್ ಜಿಲ್ಲೆಯ ಹಳ್ಳಿಗಳಲ್ಲಿ ಉಗ್ರರು ಅಡಗಿರುವ ಮಾಹಿತಿ ಇದ್ದು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)
ಮುಂದಿನ ವಾರ ರಷ್ಯಾದ ಕೋವಿಡ್-19 ಚುಚ್ಚುಮದ್ದು ಪ್ರಾಯೋಗಿಕ ಬಳಕೆಗೆ ಬಿಡುಗಡೆ