ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭೂಮಿ ಪೂಜೆಗೆ ಬರೀ ಹಿಂದುಗಳಷ್ಟೇ ಅಲ್ಲದೆ ಬೇರೆ ಕೆಲವು ಸಮುದಾಯದವರೂ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಅಹಮಾದಾಬಾದ್ನ ಜೈನ ಸಮುದಾಯ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ದೇವಾಲಯಕ್ಕೆ 24 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಗಳನ್ನು ಸಮರ್ಪಿಸಿದೆ.
ಜೈನ ಸಾಧುಗಳು ಇಟ್ಟಿಗೆಗಳನ್ನು ಇಂದು ಅಹಮದಾಬಾದ್ನಲ್ಲಿರುವ ಆರ್ಎಸ್ಎಸ್ ಹಾಗೂ ವಿಶ್ವ ಹಿಂದು ಪರಿಷದ್ನ ಪ್ರಮುಖರಿಗೆ ಒಪ್ಪಿಸಿದ್ದು, ಅವರು ಅಯೋಧ್ಯೆಗೆ ಅದನ್ನು ಹಸ್ತಾಂತರ ಮಾಡಲಿದ್ದಾರೆ. ಇದನ್ನೂ ಓದಿ: ‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’
ಈ ಬಗ್ಗೆ ಜೈನ ಸಾಧು ಓರ್ವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆ ಶ್ರೀರಾಮಂದಿರ ನಿರ್ಮಾಣವಾಗುತ್ತಿರುವುದು ಇಡೀ ದೇಶದಲ್ಲಿರುವ ಜೈನರಿಗೆ ಸಂತೋಷ ತಂದಿದೆ. ನಾವೆಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದೇವೆ. ಆಗಸ್ಟ್ 5 ರಂದು ನಾವೂ ಸಹ ಮಂತ್ರ ಪಠಣ ಮಾಡುತ್ತೇವೆ. ಆದಷ್ಟು ಬೇಗ ಸುಲಲಿತವಾಗಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ. ಹಾಗೇ, ನಾವೀಗ ಅರ್ಪಿಸುತ್ತಿರುವ 24 ಕೆಜಿ ಬೆಳ್ಳಿಯ ಇಟ್ಟಿಗೆ, ನಮ್ಮ ಸಮುದಾಯದ ಹಲವರ ಕೊಡುಗೆ ಎಂದೂ ಹೇಳಿದ್ದಾರೆ.(ಏಜೆನ್ಸೀಸ್)
ಭಾರತೀಯ ಸೇನೆಯ ಯೋಧನೋರ್ವ ನಿಗೂಢವಾಗಿ ನಾಪತ್ತೆ; ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆ