ಗಂಗಾವತಿ: ಜೈನ ಮುನಿ ಮತ್ತು ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ನಗರದ ಮಹಾವೀರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬೆಳಗಾವಿ ಜಿಲ್ಲೆಯ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಮತ್ತು ಯುವಾ ಬ್ರಿಗೇಡ್ ಕಾರ್ಯಕರ್ತ ಗೋಪಾಲ್ ಹತ್ಯೆ ಖಂಡನೀಯ ಹಾಗೂ ಅಮಾನವೀಯ. ಅಪರಾಧ ಪ್ರಕರಣ ನಿಯಂತ್ರಿಸಬೇಕಿದ್ದ ರಾಜ್ಯ ಸರ್ಕಾರ ನಿರ್ಲಕ್ಷೃದಿಂದ ವರ್ತಿಸುತ್ತಿದ್ದು, ಅಮಾಯಕರ ಹತ್ಯೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಬೇಕಿದ್ದು, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಮಾಧ್ಯಮ ವಕ್ತಾರ ಡಬ್ಲುೃ. ವೀರಭದ್ರಪ್ಪ ನಾಯಕ, ಮುಖಂಡ ಸಂತೋಷ ಕೆಲೋಜಿ, ನಗರಸಭೆ ಸದಸ್ಯ ನವೀನ್ ಮಾಲಿ ಪಾಟೀಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಕುಮಾರ ಅರಿಕೇರಿ, ಪ್ರಧಾನ ಕಾರ್ಯದರ್ಶಿ ಅರ್ಜುನ ರಾಯ್ಕರ್, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಸಂಗಮೇಶ ಅಯೋಧ್ಯೆ, ಸಂಗಯ್ಯಸ್ವಾಮಿ ಸಂಶಿಮಠ, ವೆಂಕಟೇಶ ಜಂತಕಲ್, ಸಂಗಮೇಶ ಸುಗ್ರೀವಾ, ರಾಜೇಶ ಪಾಟೀಲ್, ಜೈನ್ ಸಮುದಾಯದ ಪ್ರಮುಖರಾದ ಎಸ್.ಜಿ.ಬಾಹುಬಲಿ, ಉಗಮಸೇಟ್, ಅನಿಲ್ ಬಾಗ್ಮಾರ್ ಇತರರಿದ್ದರು.