ತುಮಕೂರು: ಚುನಾವಣೆ ಗುಂಗಿನಿನಮದ ಹೊರಬಂದಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಾಡುತ್ತಿರುವ ಬರದ ನಿರ್ವಹಣೆಗೆ ನಿಗಾ ವಹಿಸಿದೆ.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಪಾವಗಡ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ನೀರು, ಮೇವು ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪಾವಗಡ ತಾಲೂಕು ಅಗಸರಕುಂಟೆ ಕೆರೆ ಪರಿಶೀಲನೆ ನಡೆಸಿದ ಶುಭಕಲ್ಯಾಣ್, ನಾಗಲಮಡಿಕೆಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕ್ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೈತ ಮಹಿಳೆ ಉಮಾ ಎಂಬುವವರನ್ನು ಮಾತನಾಡಿಸಿ ಮಾಹಿತಿ ಪಡೆದರು.
ಜಿಪಂ ಸಿಇಒ ಜಿ.ಪ್ರಭು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.