ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಜಾಗ್ವಾರ್ ಕಾರು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂ.ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಬಸ್ ನಿಲ್ದಾಣದ ಬಳಿ ಭಾನುವಾರ ನಡೆದಿದೆ.
ಜಾಗ್ವಾರ್ ಕಾರು ಕೋರಮಂಗಲ ನಿವಾಸಿ ನಿಶ್ಚಿತ್ ಎಂಬುವರಿಗೆ ಸೇರಿದ್ದಾಗಿದ್ದು, ಕಾರಿನಲ್ಲಿದ್ದ ನಿಶ್ಚಿತ್, ಪತ್ನಿ ಅಂಬಿಕ, ಸುಜಿತ್, ಪತ್ನಿ ಮೈತ್ರಿ ಅವಘಡದಿಂದ ಬಚಾವ್ ಆಗಿದ್ದಾರೆ.
ಮೂಡಗೆರೆ ಮೂಲದ ನಿಶ್ಚಿತ್ ನೆಲಮಂಗಲದಲ್ಲಿರುವ ತಮ್ಮ ಪ್ರಾಪರ್ಟಿ ನೋಡಲು ಬಂದು ವಾಪಸ್ಸು ತೆರಳು ವೇಳೆ ಅವಘಡ ಸಂಭವಿಸಿದೆ. ಕಾರಿನ ಬಾನೆಟ್ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನೇ ಆಹುತಿ ಪಡೆದುಕೊಂಡಿತು.
ಘಟನೆ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು-ಬೆಂಗಳೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಪಾಕಿಸ್ತಾನದಲ್ಲಿ ತಳ್ಳದೆ ಬಸ್ ಕೂಡ ಮುಂದೋಗಲ್ಲ; ಭಯಂಕರ ಟ್ರೋಲ್ ಆಗುತ್ತಿದೆ ಈ ವಿಚಾರ