ಹೈದರಾಬಾದ್: ಇತ್ತೀಚೆಗೆ ವಾಹನಗಳಲ್ಲಿ ಎಳೆದೊಯ್ದು ಅಮಾನವೀಯವಾಗಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಕಾರೊಂದು ಬೈಕ್ ಅನ್ನು ಸುಮಾರು 10 ಕಿ.ಮೀ ಎಳೆದೊಯ್ದ ಪರಿಣಾಮ ಇಬ್ಬರು ಯುವಕರು ದುರಂತ ಸಾವಿಗೀಡಾಗಿದ್ದಾರೆ.
ಈ ಘಟನೆ ಜಗ್ತಿಯಾಲ್ ಜಿಲ್ಲೆಯ ಮಲ್ಯಾಲ ಮಂಡಲದ ಮುತ್ಯಂಪೇಟೆಯಲ್ಲಿ ನಡೆದಿದೆ. ಮೃತರನ್ನು ಮೊಹಮ್ಮದ್ ಲತೀಫ್ ಮತ್ತು ಆತನ ಸ್ನೇಹಿತ ಮೊಹಮ್ಮದ್ ಹಮೀದ್ ಖಾನ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕರೀಮ್ನಗರ ಜಿಲ್ಲೆಯ ಮಾನಕೊಂಡೂರು ಮೂಲದವರು.
ಇಬ್ಬರು ಜ. 26ರಂದು ಮೆಟಪಲ್ಲಿಗೆ ಹಿಂತಿರುಗುತ್ತಿದ್ದರು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಅಡಿಯಲ್ಲಿ ಬೈಕ್ ಸಿಲುಕಿದೆ. ಕಾರು ನಿಲ್ಲಿಸದೇ ಸುಮಾರು 10 ಕಿ.ಮೀ ಹಾಗೇ ಎಳೆದುಕೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಹಮೀದ್ ಖಾನ್ ಬೈಕ್ ಓಡಿಸುತ್ತಿದ್ದ. ಆತನನ್ನು ಬೈಕ್ ಸಮೇತ ಕಾರು ಚಾಲಕ ಎಳೆದೊಯ್ದಿದ್ದು, ಹಮೀದ್ ಖಾನ್ ರಕ್ತ ರಸ್ತೆಯಲ್ಲಿ ಚೆಲ್ಲಿದೆ. ಹಿಂದೆ ಕುಳಿತಿದ್ದ ಅಬ್ದುಲ್ ಲತೀಫ್, ಕಾರು ಡಿಕ್ಕಿಯಾದ ಕೆಳಗಡೆ ಬಿದ್ದಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಹಮೀದ್ ಖಾನ್ ಕೊನೆಯುಸಿರೆಳೆದನು. ಉತ್ತಮ ಚಿಕಿತ್ಸೆಗಾಗಿ ಅಬ್ಧುಲ್ ಲತೀಫ್ನನ್ನು ಹೈದರಾಬಾದ್ನ ನಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿದೇ ಮೃತಪಟ್ಟಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಚಾಲಕ ಸಾಯಿವರ್ಧನ್ನನ್ನು ಬಂಧಿಸಲಾಗಿದೆ. ಸಾಯಿವರ್ಧನ್ ಜಗಿತಿಯಾಸ್ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರು ಪ್ರಾಥಮಿಕವಾಗಿ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಯಶಸ್ವಿಯಾಗಿ 2ನೇ ದಿನಕ್ಕೆ ಕಾಲಿಟ್ಟ ರಾಜ್ಯ ಮಟ್ಟದ ಕೃಷಿ ಮೇಳ: ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜನೆ
ಬಿಎಂಟಿಸಿ ಬಸ್ನಿಂದ ಸರಣಿ ಅಪಘಾತ: ಟ್ರಾಫಿಕ್ನಲ್ಲಿ ನಿಂತಿದ್ದ ಬೈಕ್ ಸವಾರ ದುರಂತ ಸಾವು
ಜೂ.ಎನ್ಟಿಆರ್ ಸೋದರಸಂಬಂಧಿ ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಬೆಂಗಳೂರು ಆಸ್ಪತ್ರೆಗೆ ಶಿಫ್ಟ್