More

    ‘ತಪ್ಪು ಮಾಡಿದವರ ಬೆತ್ತಲೆ ಮಾಡಿ..’ ಎಂದ ಹಿರಿಯ ನಟ ಜಗ್ಗೇಶ್​; 2017ರ ಒಂದು ಘಟನೆಯನ್ನೂ ಬಿಚ್ಚಿಟ್ಟರು !

    ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಇದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ತಮಗೆ ರಕ್ಷಣೆ ಕೊಟ್ಟರೆ ಎಲ್ಲ ಮಾಹಿತಿಯನ್ನೂ ನೀಡುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಇದೀಗ ಹಿರಿಯ ನಟ, ನವರಸ ನಾಯಕ ಜಗ್ಗೇಶ್​ ಅವರು ಸರಣಿ ಟ್ವೀಟ್​ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ನಶೆ ಹಾದರದ ಹಿಂದೆ ಬರೀ ಸಿನಿಮಾ ಮಾತ್ರವಲ್ಲ, ಇಡೀ ಸಮಾಜವೇ ಆಕರ್ಷಿತವಾಗುತ್ತಿದೆ. ಯಾರು ಶ್ರಮಪಟ್ಟು ಜೀವನವನ್ನು ಗೆದ್ದಿರುತ್ತಾರೋ ಅವರ ಹೆಜ್ಜೆ ಎಂದಿಗೂ ತಪ್ಪು ದಾರಿ ತುಳಿಯುವುದಿಲ್ಲ. ಯಾರು ವಾಮಮಾರ್ಗದಲ್ಲಿ ಜಯ ಸಾಧಿಸಿರುತ್ತಾರೋ ಅವರೇ ನಶೆ ಹಾದರದ ದಾಸರು..ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಸಲ್ಮಾನ್​ ಖಾನ್​…

    ಸರಿಯಾಗಿ ಬಾಳಿ, ಬದುಕಲು ನಿರ್ಧಾರ ಮಾಡಿ, ಶ್ರಮವಹಿಸುವವರು ಎಲ್ಲೇ ಇದ್ದರೂ ಶ್ರೇಷ್ಠವಾಗಿಯೇ ಉಳಿಯುತ್ತಾರೆ. ನಾನು ನನ್ನಿಷ್ಟ, ನನ್ನ ಬದುಕು ಎನ್ನುವವರನ್ನು ಮಠಕ್ಕೆ ಸೇರಿಸಿದರೂ, ಅವರು ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲ ಬದುಕಿ, ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್​ ಮಾರ್​..ದೋ ತುಕಡಾ..ತಪ್ಪು ಮಾಡಿದವರ ಬೆತ್ತಲೆ ಮಾಡಿ ! ಆಗಲಾದರೂ ಜನಕ್ಕೆ ಅರಿವಾಗಲಿ ಎಂದು ಜಗ್ಗೇಶ್​ ಅವರು ಇನ್ನೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ:  ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ಹಾಗೇ 2017ರಲ್ಲಿ ಪಾರ್ಟಿಗೆ ಹೋದಾಗ ತಮಗೆ ಆದ ಅನುಭವವನ್ನೂ ಜಗ್ಗೇಶ್​ ಅವರು ಹಂಚಿಕೊಂಡಿದ್ದಾರೆ. 2017ರಲ್ಲಿ ಬಲವಂತಕ್ಕೆ ಮಣಿದು ರಾಜಕಾರಣಿಯೋರ್ವರ ಪಾರ್ಟಿಗೆ ಹೋಗಿದ್ದೆ. ಅರ್ಧಗಂಟೆಯಾಗುವಷ್ಟರಲ್ಲೇ ಆ ಜಾಗದಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯನ್ನು ನೋಡಿ ನಾನು ಹಾಗೂ ಅಂದು ನನ್ನೊಂದಿಗೆ ಇದ್ದ ಆತ್ಮೀಯ ಯುವನಟ ಗ…! ಹೇಳದೆ, ಕೇಳದೆ ಲಿಫ್ಟ್​ ಬಳಸದೆ 12 ಮಹಡಿ ಇಳಿದು ಓಡಿದೆವು. ಅದೇ ಕಡೆ, ನನಗೆ ಮತ್ಯಾರೂ ಕರೆ ಮಾಡದಂತೆ ಮೊಬೈಲ್​ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು..! ಎಂದು ಜಗ್ಗೇಶ್​ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)

    ಗಣಿ ಮಾಲೀಕರಿಗೆ ನೋಟಿಸ್ ಕೊಡಿ ; ಹಾಳಾದ ರಸ್ತೆ ಸರಿಪಡಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ಶಾಸಕ ಗೌರಿಶಂಕರ್ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts