More

    ಹಿಂದೂಗಳ ದೇವಾಲಯ ಕೆಡವಿದ್ದು ನಿಜವಾಯ್ತು: ಸಿ.ಟಿ.ರವಿ

    ಚಿಕ್ಕಮಗಳೂರು: ಸಾವಿರಾರು ಹಿಂದೂ ದೇವಾಲಯಗಳು ನಾಶ ಮಾಡಿ ಮಸೀದಿ, ದರ್ಗಾ ಕಟ್ಟಿದ್ದಾರೆ ಎಂದು ಹೇಳುತ್ತಿದ್ದುದು ಈಗ ನಿಜವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

    ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಮಾತನಾಡಿದ ಅವರು, 32 ಸಾವಿರಕ್ಕೂ ಅಧಿಕ ದೇವಾಲಯಗಳ ನಾಶ ಮಾಡಿ ಮಸೀದಿ, ದರ್ಗಾ ನಿರ್ಮಿಸಿರುವುದು ನಿಜವಾಗಿದೆ ಎಂಬುದಕ್ಕೆ ನಿನ್ನೆ ಮಂಗಳೂರಿನಲ್ಲಿ ದರ್ಗಾ ನವೀಕರಣದ ಸಮಯದಲ್ಲಿ ಕಂಡುಬಂದ ಹಿಂದೂ ದೇವಾಲಯವೇ ಸಾಕ್ಷಿ ಎಂದು ಹೇಳಿದರು.

    ಅಂಗೈ ಹುಣ್ಣಿಗೆ ದಾಖಲೆ ಬೇಕಿಲ್ಲ, ಮುಸಲ್ಮಾನರೆ ದಾಖಲೆಗಳಲ್ಲಿ ವೈಭವೀಕರಿಸಿ ಹೇಳಿಕೊಂಡಿದ್ದಾರೆ.ಶಿವ, ವಿಷ್ಣು, ರಾಮ ಮಂದಿರ ನಾಶ ಮಾಡಿದೆವು ಎಂದು ಅವರೇ ಹೇಳಿಕೊಂಡಿದ್ದಾರೆ..ಸಾಕ್ಷಿ ಕೇಳುವ ಜಾತ್ಯಾತೀತ ಸೋಗಲಾಡಿ ಮೂರ್ಖರಿಗೆ ಮಂಗಳೂರಲ್ಲಿ ಸಾಕ್ಷಿ ಸಿಕ್ಕಿದೆ ಎಂದು ತಿರುಗೇಟು ನೀಡಿದರು.

    ಈಗಲೂ ಇಸ್ಲಾಂ ಶಾಂತಿಗಾಗಿ ಎಂದು ಯಾರಾದರೂ ಹೇಳಿದರೆ ಅವರಿಂದ ರಾಷ್ಟ್ರ ಉಳಿಯಲು ಸಾಧ್ಯವಿಲ್ಲ.28 ದೇಶದ ನಾಗರೀಕತೆ ನಾಶ ಮಾಡಿ ಅದು ಬೆಳೆದಿದೆ.ಭಾರತದ ಬಹುಭಾಗವನ್ನ ನಾವು ಕಳೆದುಕೊಂಡಿದ್ದೇವೆ.ಸಿಂಧೂ ನದಿ‌ ನಾಗರೀಕತೆಯನ್ನುಇಸ್ಲಾಂ ನಾಶ ನಾಶ ಮಾಡಿದ್ದು ನಮಗೆ ಗೊತ್ತು ಆ ಸತ್ಯವನ್ನ ಹೇಳುತ್ತೇವೆ, ಯಾಕಂದ್ರೆ, ಗಲಭೆ ಹುಟ್ಟಾಕಲು ಅಲ್ಲ, ದೇಶ ಉಳಿಯಲು ಎಂದರು.

    ಐಪಿಎಲ್​ನಲ್ಲಿ ಆಡಲು ಅವಕಾಶ ಕೇಳಿದ್ರಾ ನಟ ಆಮೀರ್ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts